ಭಟ್ಕಳ, ನವೆಂಬರ್ 15: ತಾಲೂಕಿನ ಬೆಂಗ್ರೆ ಶಿಲೆಕಲ್ಲು ಕ್ವಾರಿಗಳ ಸುತ್ತಮುತ್ತ ಕಾನೂನು ಬಾಹೀರವಾಗಿ ಸ್ಪೋಟಕಗಳನ್ನು ಪೂರೈಸಿದ್ದ ಆರೋಪದ ಮೇರೆಗೆ ಕರಾವಳಿ ಕಾವಲು ಪಡೆಯ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಂದಾಪುರ ಕೋಟೇಶ್ವರ ನಿವಾಸಿ ಏಕನಾಥ ಸೀತಾರಾಮ ಬೋಳಾರ ಎಂದು ಗುರುತಿಸಲಾಗಿದೆ. ಸ್ಪೋಟಕ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧಿತರಾಗಿದ್ದ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಲಯ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಸ್ಪೋಟಕ ಪೂರೈಕೆಯ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಮ್ಮ ವಶಕ್ಕೆ ನೀಡಲು ಪೊಲೀಸರು ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ವಿಕ್ಟರ್ ಗೋಮ್ಸ ವಾದ ಮಂಡಿಸಿದ್ದರು.