ಕಾರವಾರ: ಪ್ರಸುತ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಟಾನಗೊಳಿಸುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತರಕಾರಿ ಹಾಗೂ ಸಾಂಬಾರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ, ಯಾಂತ್ರಿಕರಣ ಯೋಜನೆಯಡಿ ವೀಡ್ಕಟರ್,ಆಲ್ಯೂಮಿನಿಯಂ ಏಣಿ,ಸಿಂಪಡಣಾ ಯಂತ್ರ,ಪವರ್ ಟಿಲ್ಲರ್ ಮುಂತಾದ ಯಂತ್ರಗಳಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು. ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು 90% ಸಹಾಯಧನ ಹಾಗೂ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಜೇನು ಕುಟುಂಬ, ಪೆಟ್ಟಿಗೆ ಹಾಗೂ ಸ್ಟಾö್ಯಂಡ್ ಖರೀದಿಗೆ 75% ಸಹಾಯಧನ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಜೂ. 20 ಕೊನೆಯ ದಿನವಾಗಿರುತ್ತದೆ.