ಕಾರವಾರ: ತೈಲ ಬೆಳೆಗಳಲ್ಲಿ ತಾಳೆ ಬೆಳೆ ಹೆಚ್ಚಿನ ಇಳುವರಿ ನೀಡುವ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ, ಈ ನಿಟ್ಟಿನಲ್ಲಿ, ತಾಳೆ ಬೆಳೆ ಪ್ರದೇಶವನ್ನು ಹೆಚ್ಚಿಸಲು ತಾಳೆ ಬೆಳೆ ಯೋಜನೆಯನ್ನು ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ.
ಈ ಯೋಜನೆಯಡಿ ಸರ್ಕಾರ ಅನುಮೋದಿಸಿದ ಕಂಪನಿ,ಸAಸ್ಥೆಯವರೇ ರೈತರ ಜಮೀನಿಗೆ ಬಂದು ಸಸಿ ನಾಟಿಗೆ ಮಾರ್ಗದರ್ಶನ, ಸಸಿ ಪೂರೈಕೆ, ನಿರ್ವಹಣೆಗೆ ಸಲಹೆ, ಕಟಾವು, ಖರೀದಿಗೆ ಜವಾಬ್ದಾರರಾಗಿರುತ್ತಾರೆ.
ತಾಳೆ ಸಸಿಗಳ ನಾಟಿಗೆ ಪ್ರತಿ ಎಕರೆಗೆ ರೂ. 11600 ಗಳ ಸಹಾಯಧನ ನೀಡಲಾಗುವುದು ಮೊದಲ ನಾಲ್ಕು ವರ್ಷಗಳ ಕಾಲ ನಿರ್ವಹಣೆಗೆ ರೂ, 2200 ಹಾಗೂ ಅಂತರ ಬೆಳೆ ಬೆಳೆಯಲು ರೂ. 2000 ಗಳ ಸಹಾಯಧನ ನೀಡಲಾಗುವುದು, ಸದರಿ ಯೋಜನೆಯ ಫಲಾನುಭವಿಗಳಿಗೆ ಹನಿ ನೀರಾವರಿ ಅಳವಡಿಕೆ, ಡಿಸೇಲ್, ವಿದ್ಯುತ್ ಚಾಲಿತ ಪಂಪ್, ಕೊಳವೆ ಬಾವಿ ಹಾಗೂ ಯಂತ್ರೋಪಕರಣಗಳ ಖರೀದಿಗೂ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತಾಳೆ ಹಣ್ಣಿಗೆ ಖಚಿತ ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ, ರೈತರು ಈ ಯೋಜನೆಯ ಸದುಪಯೋಗ ಪಡೆಯಲು ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಾರವಾರವನ್ನು ಸಂಪರ್ಕಿಸುವAತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.