ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಮನಪಾ ನಿರ್ಲಕ್ಷ ವಿರೋಧಿಸಿ ಕಾರ್ಪೊ ರೇಟರ್ ಮರಿಯಮ್ಮ ಥಾಮಸ್ ನೇತೃತ್ವದಲ್ಲಿ ಪ್ರತಿಭಟನೆ

ಮಂಗಳೂರು: ಮನಪಾ ನಿರ್ಲಕ್ಷ ವಿರೋಧಿಸಿ ಕಾರ್ಪೊ ರೇಟರ್ ಮರಿಯಮ್ಮ ಥಾಮಸ್ ನೇತೃತ್ವದಲ್ಲಿ ಪ್ರತಿಭಟನೆ

Fri, 30 Oct 2009 04:27:00  Office Staff   S.O. News Service

ಮಂಗಳೂರು, ಅ.29: ಪದವು ಸೆಂಟ್ರಲ್ ವಾರ್ಡ್‌ನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಪೊರೇಟರ್ ಮರಿಯಮ್ಮ  ಥಾಮಸ್ ನೇತೃತ್ವದಲ್ಲಿ ಇಂದು ಮನಪಾ ಎದುರು ಮೌನ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯಲ್ಲಿ ಮನಪಾ ವಿಪಕ್ಷ ನಾಯಕ ಹರಿನಾಥ್ ಮತ್ತು ಕಾರ್ಪೊ ರೇಟರ್ ಶಶಿಧರ್ ಹೆಗ್ಡೆ  ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. 

ಮನಪಾ ಆಡಳಿತವು ತನ್ನ ವ್ಯಾಪ್ತಿಗೆ ಬರುವ ಸಾರ್ವಜನಿಕ ನಿಧಿ ಮತ್ತು ಸರಕಾರದಿಂದ ಮಂಜೂರಾಗುವ ವಿಶೇಷ ನಿಧಿಯನ್ನು ಎಲ್ಲಾ ವಾರ್ಡ್ ಗಳಿಗೆ ಸಮಾನವಾಗಿ ನೀಡಬೇಕಾಗಿ ದ್ದರೂ ಇಡೀ ನಗರದಲ್ಲಿ  ಕಾಂಕ್ರಿಟ್ ರಂಸ್ತೆ ನಿರ್ಮಿಸುವ ಇರಾದೆಯಿಂದ ಕಾರ್ಯನಿರ್ವಹಿಸುವ ಆಡಳಿತವು ಎಲ್ಲಾ ನಿಧಿಗಳನ್ನು ನಗರದ ರಸ್ತೆಗಳಿಗೆ ಮೀಸಲಿರಿಸಿ, ಹಿಂದುಳಿದ ವಾರ್ಡ್‌ಗಳ ರಸ್ತೆಗಳನ್ನು ಕಡೆಗಣಿಸುತ್ತಿದೆ ಎಂಬುದು ಪ್ರತಿಭಟನಕಾರರ ಆರೋಪವಾಗಿದೆ. 

ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಬೇಕು. ಸ್ವಯಂ ಘೋಷಿತ ಆಸ್ತಿ ತೆರಿಗೆ ಬಗ್ಗೆ ಸ್ಪಷ್ಟ ನಿರ್ಧಾರ ಸೇರಿದಂತೆ ತಮ್ಮ  ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದವರು ಆಗ್ರಹಿಸಿದ್ದಾರೆ. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮನಪಾ ಆಯುಕ್ತ ವಿಜಯ ಪ್ರಕಾಶ್,  ಪ್ರತಿಭಟನಕಾರರ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು


Share: