
ಕರ್ನಾಟಕದ ಕರಾವಳಿಯಲ್ಲಿ ಸೋಮೇಶ್ವರದಿಂದ ಕಾರವಾರದವರೆಗೆ ಸುಮಾರು ೩೦೦ ಕಿ.ಮೀ. ಸಾಗರ ತೀರವಿದೆ. ದ. ಕ. ೪೨ ಕಿ.ಮೀ., ಉಡುಪಿ ಜಿಲ್ಲೆ ೯೮ ಕಿ.ಮೀ. ಹಾಗೂ ಉತ್ತರ ಕನ್ನಡ ಜಿಲ್ಲೆ ೧೬೦ ಕಿ.ಮೀ. ಸಾಗರ ತೀರವನ್ನು ಹೊಂದಿದೆ. ಇದಲ್ಲದೆ ಪ್ರಕೃತಿ ಸಂಪನ್ನ ಬಹುಸಂಖ್ಯೆಯ ಹಿನ್ನೀರು ತಾಣಗಳಿವೆ.
ಸಾಗರ ತೀರದಲ್ಲಿ ಕೆಲವೇ ಕೆಲವು ತಾಣಗಳನ್ನು ಹೊರತುಪಡಿಸಿದರೆ ಪ್ರವಾಸೋದ್ಯಮ ದ ನಿಟ್ಟಿನಲ್ಲಿ ಗುರುತಿಸಿಲ್ಲ. ದ.ಕನ್ನಡದಲ್ಲಿ ಸೋಮೇಶ್ವರ, ಸುರತ್ಕಲ್, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು, ಸುರತ್ಕಲ್ ಬೀಚ್ಗಳು ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಬೀಚ್ಗಳಾಗಿವೆ.
ಉಡುಪಿ ಜಿಲ್ಲೆಯಲ್ಲಿ ಕಾಪು, ಮಲ್ಪೆ, ಮರವಂತೆ, ಸೈಂಟ್ಮೆರೀಸ್ ದ್ವೀಪ, ಉತ್ತರ ಕನ್ನಡ ದಲ್ಲಿ ಮುರ್ಡೇಶ್ವರ, ಕಾರವಾರ ಮುಂತಾದ ಬೀಚ್ಗಳಿವೆ. ಇದಕ್ಕೆ ಹೊರತಾಗಿ ಇನ್ನೂ ಅನೇಕ ರಮಣೀಯ ತಾಣಗಳಿದ್ದರೂ ಇಲ್ಲಿ ಬೀಚ್ನ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆ ದಿಲ್ಲ. ಗುರುತಿಸಲ್ಪಟ್ಟಿರುವ ಬೀಚ್ಗಳಲ್ಲಿ ಬೆರಳೆಣಿಕೆಯ ಬೀಚ್ಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಬೀಚ್ ಪ್ರವಾಸೋದ್ಯಮ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನಮ್ಮ ನೆರೆಯ ರಾಜ್ಯ ಗಳಾದ ಕೇರಳ ಮತ್ತು ಗೋವಾ ಬಹಳಷ್ಟು ಮುಂದಿವೆ. ಗೋವಾ ರಾಜ್ಯದಲ್ಲಿ ೯ ಬೀಚ್ ಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೇರಳ ರಾಜ್ಯದಲ್ಲಿ ಸಾಗರ ಪ್ರವಾಸೋದ್ಯಮ ಒಂದು ಪ್ರಮುಖ ಆದಾಯ ಮೂಲವಾಗಿ ಪರಿಗಣಿಸಲ್ಪಟ್ಟಿದೆ.
ಈ ಕ್ಷೇತ್ರದಲ್ಲಿ ದೇಶ-ವಿದೇಶಗಳಿಂದ ಹೂಡಿಕೆಗಳು ಹರಿದು ಬಂದಿವೆ. ರಾಷ್ಟ್ರ, ಅಂತಾರಾ ಷ್ಟ್ರೀಯವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬೀಚ್ಗಳಲ್ಲದೆ ಹಿನ್ನೀರು ವಾಟರ್ ಪಾರ್ಕ್ಗಳು, ಕಾಟೇಜ್ಗಳು, ರೆಸಾರ್ಟ್ಗಳು ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
-ವಿಪುಲ ಅವಕಾಶ: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ದೇಶ-ವಿದೇಶ ಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳಲ್ಲಿ ದೇಶ-ವಿದೇಶಗಳ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರ ಪೋಷಕರು ಆಗಾಗ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಬಹಳಷ್ಟು ಪುಣ್ಯ ಕ್ಷೇತ್ರಗಳಿವೆ. ಗಣನೀಯ ಸಂಖ್ಯೆಯಲ್ಲಿ ಸಂದರ್ಶ ಕರು ಜಿಲ್ಲೆಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾಗರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ ಪ್ರಸ್ತುತ ಇಲ್ಲಿ ಸಾಗರ ಪ್ರವಾಸೋದ್ಯಮ ಸೊರಗಿರುವುದರಿಂದ ಹೆಚ್ಚಿನ ಮಂದಿ ಕೇರಳ ಅಥವಾ ಗೋವಾಕ್ಕೆ ತೆರಳುತ್ತಾರೆ.
-ಸಿಆರ್ಝಡ್ ನಿಯಮಗಳು: ಬೀಚ್ ಟೂರಿಸಂ ಅಭಿವೃದ್ಧಿಗೆ ಸಿಆರ್ಝಡ್ ನಿಯಮಾ ವಳಿಗಳು ತೊಡಕಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮುದ್ರದಲ್ಲಿ ಭರತದಿಂದ ೫೦೦ ಮೀಟರ್ವರೆಗೆ ಯಾವುದೇ ರಚನೆಗಳಿಗೆ ಅವಕಾಶವಿಲ್ಲ. ಹಿನ್ನೀರು ಪ್ರದೇಶದಲ್ಲಿ ಅಗಲ ೧೦೦ ಮೀಟರ್ನಿಂದ ೩೦೦ ಮೀಟರ್ವರೆಗೆ ಇದ್ದರೆ ೧೦೦ ಮೀಟರ್, ೩೦೦ ಕ್ಕಿಂತ ಹೆಚ್ಚಿದ್ದರೆ ೧೫೦ ಮೀಟರ್ವರೆಗೆ ಯಾವುದೇ ರಚನೆಗಳಿಗೆ ಅವಕಾಶವಿಲ್ಲ.
ಆದರೆ ಇಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆದು ನಡೆಸಬಹುದಾಗಿದೆ. ಅದರ ಈಚೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿವೆ. ಪರಿಸರ ಮತ್ತು ಸಚಿವಾಲಯದ ಅನುಮತಿ ಪಡೆಯುವುದು ಅಗತ್ಯ. ನಿಯಮಗಳನ್ನು ಉಲ್ಲಂಘಿಸದೆ ಬೀಚ್ ಟೂರಿಸಂ ಅಭಿವೃದ್ಧಿಗೆ ಬಹಳಷ್ಟು ಅವಕಾಶಗಳಿವೆ ಎಂದು ಸಿಆರ್ಝಡ್ ಅಧಿಕಾರಿಗಳು ವಿವರಿಸುತ್ತಾರೆ.
ಪ್ರಯತ್ನಗಳು ಸಾಗುತ್ತಿವೆ: ಯೋಗೀಶ್ ಭಟ್
ಜಿಲ್ಲೆಯಲ್ಲಿ ಸಾಗರ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗು ತ್ತಿವೆ. ತಣ್ಣೀರುಬಾವಿಯಲ್ಲಿ ಸುಮಾರು ೧೫೦ ಎಕ್ರೆ ಪ್ರದೇಶದಲ್ಲಿ ಗಾಲ್ಫ್ಕೋರ್ಟ್ ಮತ್ತು ಮೆರೈನ್ಪಾರ್ಕ್ ಸ್ಥಾಪನೆ ಕುರಿತಂತೆ ಪ್ರಕ್ರಿಯೆಗಳು ಅಂತಿಮ ಘಟ್ಟದಲ್ಲಿವೆ. ಇದೇ ರೀತಿ ಮಂಗಳಾ ಕಾರ್ನಿಶ್ ಸೇರಿದಂತೆ ಸಾಗರ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆ ಗಳನ್ನು ತರುವ ಹಾಗೂ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಗಳು ನಡೆದಿವೆ ಎಂದು ವಿವರಿಸುತ್ತಾರೆ ಶಾಸಕ ಹಾಗೂ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ನಿಗಮದ ಅಧ್ಯಕ್ಷ ಎನ್. ಯೋಗೀಶ್ ಭಟ್.
ಪರಿಸರ ಮತ್ತು ಸಾಗರ ಸೂಕ್ಷ್ಮತೆಗೆ ಧಕ್ಕೆಯಾಗದ ರೀತಿಯಲ್ಲಿ ಸಿಆರ್ಝಡ್ ನಿಯಮಾ ವಳಿಯಲ್ಲಿ ಸ್ವಲ್ಪ ರಿಯಾಯಿತಿ ಅಗತ್ಯವಿದೆ. ಇದರಿಂದಾಗಿ ಸಾಗರ ಪ್ರವಾಸೋದ್ಯಮ ಪ್ರಗತಿ ಕಾಣಲು ಸಾಧ್ಯವಿದೆ ಎನ್ನುತ್ತಾರೆ ಅವರು.
ಕೋಟಿ ಕೋಟಿ ರೂ. ಲೆಕ್ಕಾಚಾರ ಬೇಡ
ಮಾತೆತ್ತಿದರೆ ಸಚಿವರಾದಿಯಾಗಿ ಎಲ್ಲರೂ ಕೋಟಿ ಕೋಟಿ ರೂ.ಗಳ ಯೋಜನೆಯ ಲೆಕ್ಕ ಹೇಳುತ್ತಾರೆ. ಆದರೆ ನಮ್ಮ ಬೀಚ್ಗಳಲ್ಲಿ ಕನಿಷ್ಠ ಮೂಲ ಸೌಕರ್ಯ ವಾದರೂ ಇದೆಯೇ? ನೆರಳಿನ ಆಶ್ರಯವಿಲ್ಲ, ಕುಡಿಯುವ ನೀರಿಲ್ಲ, ಶೌಚಾಲಯ ಹುಡುಕಿದರೂ ಸಿಗುವುದಿಲ್ಲ !
ಸ್ವಲ್ಪ ಗಮನ ಹರಿಸಿದರೆ...
ದೊಡ್ಡ ದೊಡ್ಡ ಯೋಜನೆಗಳು ಜಾರಿಗೊಳ್ಳಲಿ, ಜನ ಬೇಡ ಎನ್ನುವುದಿಲ್ಲ. ಮೊದಲಾಗಿ ಸಣ್ಣ ಪುಟ್ಟ ವ್ಯವಸ್ಥೆಗಳನ್ನು ಕಲ್ಪಿಸಿ. ಸ್ಥಳೀಯಾಡಳಿತ ವಾಹನ ಪಾರ್ಕಿಂಗ್ ಮೊದಲಾದ ಸಣ್ಣ ಶುಲ್ಕಗಳನ್ನು ವಸೂಲಿ ಮಾಡಿದರೆ ಅದರಿಂದಲೇ ಬೀಚ್ನಲ್ಲಿ ಸಾಕಷ್ಟು ಸೌಲಭ್ಯ ಒದಗಿಸಬಹುದು. ಇದಕ್ಕೂ ದಿಲ್ಲಿ, ಬೆಂಗಳೂರಿನ ಆದೇಶ ಕಾಯುವುದು ಏಕೆ?
ಸೌಜನ್ಯ: ಉದಯವಾಣಿ