ಭಟ್ಕಳ: ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಬಿವೃದ್ದಿಗಾಗಿ ಹುಟ್ಟಿಕೊಂಡ ಪ್ರತಿಷ್ಟಿತ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪತ್ರಕರ್ತರಾದ ಮನಮೋಹನ ಜಿ. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆಯ ಪ್ರಕ್ರಿಯೆ ನಡೆಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ನಾಯ್ಕ ಬೆಳಕೆ, ಉಪಾಧ್ಯ÷ಕ್ಷರಾಗಿ ಶ್ರೀಧರ ನಾಯ್ಕ,ಮಣ್ಕುಳಿ, ಖಜಾಂಚಿಯಾಗಿ ರಾಘವೇಂದ್ರ ಎಂ. ನಾಯ್ಕ, ಗೌರವಾಧ್ಯಕ್ಷರಾಗಿ ಕೆ.ಆರ್.ನಾಯ್ಕ,ಸದಸ್ಯರಾಗಿ ರವಿ ನಾಯ್ಕ,ಮಣ್ಕುಳಿ, ಚಂದ್ರಶೇಖರ ನಾಯ್ಕ, ಶ್ರೀಮತಿ ಕಮಲಾ ನಾಯ್ಕ, ಆಯ್ಕೆಗೊಂಡರು. ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಶುಭ ಕೋರಿದ್ದಾರೆ.