ಶಿರಸಿ: ಮೂರು ತಲೆಮಾರಿನ ದಾಖಲೆ ಮುಂತಾದ ಕಾನೂನಾತ್ಮಕ ಅಂಶಗ¼ Àಕುರಿತು ಹೋರಾಟಗಾರರ ಅಗ್ರಹದ ಮೇರೆಗೆ ಧರಣಿ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಆಗಮಿಸಿದಾಗ ಕಾನೂನಿನ ಅಂಶಗಳ ಅಸ್ಪಷ್ಟೀಕರಣ ಉತ್ತರಕ್ಕೆ ಮುತ್ತಿಗೆ ಹಾಕಿ ಗೆರಾವು ಹಾಕಲಾಯಿತು.
ತದನಂತರ ಹೆಚ್ಚುವರಿ ಪಿ.ಸಿ.ಸಿ.ಎಫ್, ಎಕೆ ಸಿಂಗ್ ಅವರೊಂದಿಗೆ ಸಮಾಲೋಚಿಸಿ ಫೇಬ್ರವರಿ 20 ರಿಂದ 25 ರ ಒಳಗೆ ಶಿರಸಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಭೆ ಸಂಘಟಿಸಲಾಗುವುದೆಂದು ಆಶ್ವಾಸನೆ ನೀಡಿದ ನಂತರ ಗೆರಾವು ಹಿಂದಕ್ಕೆ ಪಡೆಯಲಾಯಿತು.