ಬೆಂಗಳೂರು,ಜನವರಿ,10: ನೈಸ್ ಯೋಜನೆ ವಿಷಯದಲ್ಲಿ ಜೆಡಿಎಸ್-ಬಿಜೆಪಿ ನಡುವಣ ಸಮರ ತಾರಕಕ್ಕೇರಿದ್ದು ರೈತರಿಗೆ ಅನ್ಯಾಯ ಮಾಡುತ್ತಿರುವ ಮುಖ್ಯಮಂತ್ರಿ ಒಬ್ಬ ಬಾಸ್ಟರ್ಡ್ ಎಂದು ಮಾಜೀ ಪ್ರಧಾನಿ ದೇವೇಗೌಡ ಗುಡುಗಿದ್ದರೆ,ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನ್ಮೋಹನ್ಸಿಂಗ್ ಸಮ್ಮುಖದಲ್ಲೇ ಪ್ರತಿಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲೆಸೆದಿದ್ದಾರೆ.
ಸಿಟ್ಟಿನ ಭರದಲ್ಲಿ ಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲಡಿ ಬಾಸ್ಟರ್ಡ್,ಬೋಸಡಿ ಮಗ ಎಂದು ಬೈದಾಡಿದ್ದೇ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು ಅವರ ಮಾತಿಗೆ ಕೆಂಡಾಮಂಡಲಗೊಂಡಿರುವ ಬಿಜೆಪಿ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಗುಡುಗಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೌಡರ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದು,ಹತಾಶೆಯಿಂದ ಮಾತನಾಡುತ್ತಿರುವ ದೇವೇಗೌಡರ ಬುದ್ಧಿ ಸ್ಥಿಮಿತದಲ್ಲಿಲ್ಲ.ಅವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಬ್ಬರಿಸಿದ್ದು ಆ ಮೂಲಕ ಉಭಯ ಪಕ್ಷಗಳ ಮಧ್ಯೆ ಭಾರೀ ಸಮರ ವಿದ್ಯುಕ್ತವಾಗಿ ಶುರುವಾದಂತಾಗಿದೆ.
ಇದಕ್ಕೂ ಮುನ್ನ ಮೂಲ ಒಪ್ಪಂದವನ್ನು ಉಲ್ಲಂಘಿಸಿ ನೈಸ್ ಯೋಜನೆಗೆ ಐದು ಸಾವಿರ ಎಕರೆ ಹೆಚ್ಚುವರಿ ಭೂಮಿಯನ್ನು ನೀಡಲಾಗಿದೆ ಎಂದು ಆರೋಪಿಸಿ ದೇವೇಗೌಡ ಇಂದು ದೊಡ್ಡ ಸೋಗೂರಿನ ಬಳಿ ಇರುವ ನೈಸ್ ಕಛೇರಿಯ ಎದುರು ಧರಣಿ ನಡೆಸಿದ್ದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಬಿಎಂಪಿ ಚುನಾವಣೆಗಾಗಿ ನಡೆಸುತ್ತಿರುವ ಗಿಮಿಕ್ ಎಂದಿದ್ದೇ ಗೌಡರ ಆಕ್ರೋಶಕ್ಕೆ ಕಾರಣವಾಯಿತು.
ಇದರಿಂದ ಕೆಂಡಾಮಂಡಲಗೊಂಡ ದೇವೇಗೌಡ ಮಾಧ್ಯಮದವರ ಬಳಿ ಮಾತನಾಡುತ್ತಾ,ಬಿಬಿಎಂಪಿ ಚುನಾವಣೆಗಾಗಿ ನಾನು ಮಾಡುತ್ತಿರುವ ಗಿಮಿಕ್ ಎನ್ನುತ್ತಾನಲ್ಲ?ಯಾವನ್ರೀ ಈ ಯಡಿಯೂರಪ್ಪ?ಬ್ಲಡಿ ಬಾಸ್ಟರ್ಡ್ ಎಂದು ಗುಡುಗಿದರು.
ನಾನು ರೈತನಿಗಾಗಿ ಹೋರಾಡುತ್ತಿರುವವನು,ಹುಟ್ಟು ಹೋರಾಟಗಾರ.ಇವನು(ಯಡಿಯೂರಪ್ಪ)ನನ್ನ ಬಗ್ಗೆ ಏನ್ರೀ ಹೇಳೋದು?ನಾನ್ಸೆನ್ಸ್.ನನ್ನ ಮನೆ ಬಾಗಿಲಿಗೆ ಶೋಭಾ ಕರಂದ್ಲಾಜೆಯನ್ನು ಕಳಿಸಿ ಬಿಜೆಪಿಗೆ ನಾನು ರಾಜೀನಾಮೆ ಕೊಡ್ತೀನಿ.ನನ್ನನ್ನು ಮಂತ್ರಿ ಮಾಡಿ ಎಂದು ಭಿಕ್ಷೆ ಬೇಡಿದವನು ಅವನು.ಅವನೇನ್ರೀ ನನ್ನ ಬಗ್ಗೆ ಹೇಳೋದು?ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇರುವ ಕೆಲವು ಅಧಿಕಾರಿಗಳಿಗೆ ರೈತರ ಹಿತ ಬೇಕಾಗಿದೆ.ಆದರೆ ಇವರು ದುಷ್ಟ ಕೂಟ ಕಟ್ಟಿಕೊಂಡು ಅನ್ಯಾಯ ಮಾಡಲು ಹೊರಟಿದ್ದಾರೆ.ರಸ್ತೆ ಇರುವುದೇ ಎರಡು ಕಿಲೋಮೀಟರ್ ಆಚೆಗೆ.ಇಲ್ಲಿ ನಲವತ್ತರಿಂದ ಐವತ್ತು ಸಾವಿರ ಮನೆಗಳಿವೆ.ಅದರಲ್ಲೂ ಹೆಚ್ಚಾಗಿ ಬೋವಿಗಳು ಮತ್ತು ಪರಿಶಿಷ್ಟರ ಮನೆಗಳಿವೆ.ಇವರ ಮನೆಗಳನ್ನು ರಸ್ತೆಯ ಹೆಸರಿನಲ್ಲಿ ಕಿತ್ತು ಕೊಳ್ಳಲು ಹೊರಟಿದ್ದಾರೆ ಎಂದು ಗುಡುಗಿದರು. ನೋಡಿದರೆ ಹೊಟ್ಟೆ ಉರಿಯುತ್ತದೆ.ಕೇವಲ ಹತ್ತು ರೂಪಾಯಿಗೆ ಲೀಸ್ ಆಧಾರದ ಮೇಲೆ ಕೊಟ್ಟಿದಾರೆ.ಕಟ್ಟಡಗಳಿದ್ದರೆ ಅದನ್ನೂ ಸೇರಿಸಿ ನೈಸ್ ಕಂಪನಿಗೆ ಕೊಡಬೇಕು ಅಂತ ಅಧಿಸೂಚನೆ ಹೊರಡಿಸಲಾಗಿದೆ.
ನಾನೇನೂ ನನಗಾಗಿ ಸುಪ್ರೀಂಕೊರ್ಟ್ನಲ್ಲಿ ಹೋರಾಡುತ್ತಿಲ್ಲ.ಯಡಿಯೂರಪ್ಪನ ಅನ್ಯಾಯವನ್ನು ಕಂಡು ಸುಮ್ಮನಿರಲಾಗದೇ ಹೋರಾಡುತ್ತಿದ್ದೇನೆ.ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದರು.
ಸರಿಯಾಗಿ ಕೂತರೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ರೇವಣ್ಣ ಇವರನ್ನು ಅಸೆಂಬ್ಲಿಗೆ ಕರೆಸಿ ಛೀಮಾರಿ ಹಾಕಬೇಕಾಗುತ್ತದೆ ಎಂದು ಗೌಡರು ಆಕ್ರೋಶ ವ್ಯಕ್ತಪಡಿಸಿದರು.
ಕಾಸು ಕೊಟ್ಟರೆ ಎಕ್ಕಡ ತಿನ್ನಲು,ನಮ್ಮಪ್ಪ ನನ್ನನ್ನು ಅದಕ್ಕಾಗಿ ಹುಟ್ಟಿಸಿಲ್ಲ.ಆ ಹಾರ್ನಳ್ಳಿ ರಾಮಸ್ವಾಮಿ ಮಗನ ಪೇಪರ್ ಕೊಡ್ರೀ(ತಮ್ಮ ಆಪ್ತರಿಗೆ)ಅವನೂ ಒಬ್ಬ ಅಡ್ವೋಕೇಟ್ ಜನರಲ್.ನಾಚಿಕೆಯಾಗಬೇಕು.ಅವನ ಪತ್ರಿಕೆಯಲ್ಲಿ ಬರೆದಿದ್ದಾರೆ.ಗೌಡರ ವಿರುದ್ಧ ರೈತರ ರಣ ಕಹಳೆ ಅಂತೆ.ರಣ ಕಹಳೆ.
ಮುಗೀತು ಮುಗೀತು ಅವರ ಕತೆ.ಇನ್ನು ಯುದ್ಧ ಶುರುವಾಯಿತು.ಬರಲಿ. ಹೈಕೋರ್ಟ್ನಿಂದ ಹೊರಗೆ ಹೋಗಲು ಅವನಿಗೂ ಒಂದು ಕಾರು ಕೊಡಬೇಕು.ಅವನ್ಯಾವನೋ ಶಿವಮೊಗ್ಗದವನು ಸಂಡೇ ಲಾಯರ್ ಅವನಿಗೂ ಒಂದು ಕಾರು ಕೊಟ್ಟಿದ್ದಾರೆ.ಅವನಿಗೂ ಒಬ್ಬ ಪೋಲೀಸ್.ಪೈಲಟ್ ಕಾರು.
ಇವನಿಗೂ(ಹಾರ್ನಳ್ಳಿ ರಾಮಸ್ವಾಮಿ ಅವರ ಮಗ)ಅದೇ ಗತಿ ಬರತ್ತೆ.ನಾಚಿಕೆಯಾಗಬೇಕು ಇವರಿಗೆ. ಅವನೊಬ್ಬ ಸಂಡೇ ಲಾಯರ್.ಈ ಹಾರ್ನಳ್ಳಿ ರಾಮಸ್ವಾಮಿಯ ಮಗನೂ ಒಬ್ಬ ಸಂಡೇ ಲಾಯರ್ ಎಂದು ದೇವೇಗೌಡರು ಕಿಡಿ ಕಾರಿದರು.