ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಜೇಶ್ವರ : ಟಿ.ವಿ9 ಕ್ಯಾಮರಾಮೇನ್‌ನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣ

ಮಂಜೇಶ್ವರ : ಟಿ.ವಿ9 ಕ್ಯಾಮರಾಮೇನ್‌ನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣ

Fri, 08 Jan 2010 08:24:00  Office Staff   S.O. News Service
ಮಂಜೇಶ್ವರ ಜನವರಿ 7:  ಅಕ್ರಮ ಮರಳು ಸಾಗಾಟದ ಚಿತ್ರೀಕರಣಕ್ಕೆ ಹೋದ ಟಿ.ವಿ ೯ ವಾಹಿನಿಯ ಕ್ಯಾಮರಾ ಮ್ಯಾನ್ ವಿಲ್ಪ್ರೆಡ್ ಡಿಸೋಜಾ, ಹಾಗೂ ಅವರ ಸಹೋದರ ಅನಿಲ್ ಡಿಸೋಜಾ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಂಜೇಶ್ವರ ಗಡಿನಾಡ ಪತ್ರಕರ್ತ ನೇತೃತ್ವದಲ್ಲಿ ಮಂಜೇಶ್ವರ ಠಾಣೆ ಮುಂದೆ ಧರಣಿ ನಡೆಸಲಾಯಿತು.
 
8-mnj01.jpg 
8-mnj02.jpg
 
 
ಹೊಸಂಗಡಿ ಪೇಟೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಠಾಣೆ ಮುಂಬಾಗದಲ್ಲಿ ಪೋಲೀಸರು ತಡೆದರು. ನಂತರ ಹಿರಿಯ ಪತ್ರಕರ್ತ ಅಚ್ಚುತ್ತ ಚೇವಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಸಿ.ಪಿ.ಐ ನೇತಾರ ಬಿ.ವಿ ರಾಜನ್ ಉದ್ಗಾಟಿಸಿದರು. ನಂತರ ಮಾತನಾಡಿದ ಅವರು ಪತ್ರಕರ್ತರ ಮೇಲಿನ ಹಲ್ಲೆ ಖಂಡನೀಯ. ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಅವರು ಆಗ್ರಹಿಸಿದರು.
 
8-mnj04.jpg
8-mnj05.jpg
8-mnj06.jpg
8-mnj07.jpg
 
 
ವಿವಿಧ ರಾಜಕೀಯ ಪಕ್ಷದ ನೇತಾರರಾದ ಮೊಹಮ್ಮದ್ ಡಿ.ಎಂ.ಕೆ ,ಆರ್ ಜಯಾನಂದ್ , ಹನೀಫ್ ಪೊಸೋಟ್, ಬಶೀರ್ ಕನಿಲ, ರಾಮಕೃಷ್ನ ಕಡಂಬಾರ್ , ಎಂ.ಅಬ್ಬಾಸ್, ಎಸ್.ಎ ರಹಿಮಾನ್ , ಎಸ್.ಅಬ್ದುಲ್ ಖಾದರ್ , ತುಳು ನಾಡು ರಕ್ಷಣಾ ವೇದಿಕೆಯ ಯೋಗೀಶ್ ಗಟ್ಟಿ ಜಪ್ಪು, ಚಂದ್ರಹಾಸ್ ರೈ, ಹಮೀದ್ ಹಸ್ಸನ್, ಫಾರೂಕ್ ಕಿನ್ಯ ಮೊದಲಾದವರು ಉಪಸ್ತಿತರಿದ್ದರು. ಪತ್ರಕರ್ತರಾದ ಆರಿಫ್ ಮಚ್ಚಂಪಾಡಿ, ರಾಜೇಶ್ ದಡ್ಡಂಗಡಿ, ರಹಿಮಾನ್ ಉದ್ಯಾವರ್ , ನಿಶಾಕಿರನ್ ,ರವೀಂದ್ರನ್ ಉಪ್ಪಳ, ಅಬ್ದುಲ್ಲ ಕುಂಬಳೆ, ಫಝಲ್ ಕುಂಬಳೆ, ಎಂ.ಕೆ.ಎಚ್ಚ್ ಪೆರ್ವಾಡ್, ಮೊದಲಾದವರು ನೇತೃತ್ವ ವಹಿಸಿದರು. ಲತೀಫ್ ಉಲುವಾರ್ ಸ್ವಾಗತಿಸಿ ಹರ್ಷಾದ್ ವರ್ಕಾಡಿ ವಂದಿಸಿದರು. ನಂತರ  ಆರೋಪಿಗಳನ್ನು ತಕ್ಷಣ ಬಂದಿಸುವಂತೆ ಆಗೃಹಿಸಿ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 


Share: