ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೊದಲ ಮಳೆಗೆ ಮುಚ್ಚಿದ ಒಳಚರಂಡಿಯಿಂದಾಗಿ ಶಂಸುದ್ದೀನ್ ವೃತ್ತ ಜಲಾವೃತ

ಮೊದಲ ಮಳೆಗೆ ಮುಚ್ಚಿದ ಒಳಚರಂಡಿಯಿಂದಾಗಿ ಶಂಸುದ್ದೀನ್ ವೃತ್ತ ಜಲಾವೃತ

Sun, 25 Jun 2023 05:57:56  Office Staff   SO News

ಭಟ್ಕಳ: ಮಳೆಗಾಲ ಆರಂಭವಾಗಿ 15 ದಿನ ಕಳೆದ ಬಳಿಕ ತಾಲೂಕಿನಾದ್ಯಂತ ಮಳೆ ಬಿರುಸು ಪಡೆದುಕೊಂಡಿದ್ದು,ಶುಕ್ರವಾರ ಬೆಳಗ್ಗೆಯಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. 
ಆದರೆ ಮೊದಲ ಮಳೆಯಿಂದಾಗಿ  ಇಲ್ಲಿನ ಶಂಸುದ್ದೀನ್ ಸರ್ಕಲ್ ನೀರಿನಿಂದ ಜಲಾವೃತಗೊಂಡಿದೆ.
ಎಡೆಬಿಡದ ಮಳೆಯಿಂದಾಗಿ ಶಂಶುದ್ದೀನ್ ವೃತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು ಅದೃಷ್ಟವಶಾತ್, ಸುರಿಯುತ್ತಿರುವ ಮಳೆಯಿಂದ ಶಂಸುದ್ದೀನ್ ವೃತ್ತದಲ್ಲಿ ನೀರು ಹರಿಯದೇ ಈ ಹಿನ್ನೆಲೆಯಲ್ಲಿ ಬೈಕ್ ಸವಾರ ಒಬ್ಬರು ದಾರಿ ತೋರದೆ ಪಕ್ಕದಲ್ಲಿ ಇದ್ದ ಗಟ್ಟಾರದಲ್ಲಿ ಬೀಳುವ ಹಂತದಲ್ಲಿ ಇದ್ದು ತಕ್ಷಣ ಕ್ಕೆ ಅಲ್ಲೇ ಪಕ್ಕದಲ್ಲಿದ್ದ ಇದ್ದ ಹೋಟೆಲ್‌ ಮಾಲೀಕರು ಒಬ್ಬರು ಸವಾರರನ್ನು ಬಚಾವ್ ಮಾಡಿದ್ದಾರೆ.
ವೃತ್ತದ ಸುತ್ತಲಿನ ಪರಿಸ್ಥಿತಿಯನ್ನು ಎರಡು ಅಂಶಗಳಿಂದ ಮತ್ತಷ್ಟು ಸಂಕೀರ್ಣಗೊಳಿಸಲಾಗಿದೆ. ಮೊದಲನೆಯದಾಗಿ, ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕಾಮಗಾರಿಯು ಸರಿಯಾದ ರಾತ್ರಿ ಬೆಳಕು ಕಳೆದುಕೊಂಡಿದೆ. ಎರಡನೆಯದಾಗಿ, ಪಾದಚಾರಿಗಳು ರಸ್ತೆ ದಾಟಲು ಸವಾಲುಗಳನ್ನು ಎದುರಿಸುತ್ತಿದ್ದಾರೆ, ಆದರೆ ಸುತ್ತಮುತ್ತಲಿನ ಒಟ್ಟಾರೆ ಕತ್ತಲೆಯಿಂದಾಗಿ ವಾಹನ ಸವಾರರು ಸಂಚರಿಸಲು ಕಷ್ಟಪಡುತ್ತಾರೆ.
ಮಳೆಯ ಸಮಯದಲ್ಲಿ, ಶಂಸುದ್ದೀನ್ ವೃತ್ತವು ಜಲಾವೃತ ಪ್ರದೇಶವಾಗಿ ಮಾರ್ಪಟ್ಟಿತು, ರಸ್ತೆ ಮತ್ತು ಚರಂಡಿ ನಡುವೆ ವ್ಯತ್ಯಾಸವನ್ನು ಗುರುತಿಸಲು ಪಾದಚಾರಿಗಳಿಗೆ ಮತ್ತು ಸವಾರರಿಗೆ ತೊಂದರೆಯಾಗಿದೆ.
ಇಷ್ಟು ದಿನ‌ ಕಳೆದರೂ ಪುರಸಭೆ ಯಿಂದ ಯಾವುದೇ ಗಟ್ಟಾರ ಸ್ವಚ್ಛ ಮಾಡಿದೆ ಇರುವುದೇ ಕಾರಣವಾಗಿದ್ದು, ಮತ್ತು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅಸಮರ್ಪಕವಾಗಿರುವ ಕಾರಣ ಈ ರೀತಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ 
ಸಮರ್ಪಕವಾಗಿ ಚರಂಡಿ ಸ್ವಚ್ಛಗೊಳಿಸದ ಕಾರಣ ನೀರು ಹೊರಹೋಗಲು ಅಡ್ಡಿಯಾಗಿದೆ.
ಇದರಿಂದ ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಬಾರಿ ಕಿರಿಕಿರಿ ಉಂಟಾಗಿದೆ.


Share: