ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೇ ೭ & ೮ರಂದು ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆ’

ಮೇ ೭ & ೮ರಂದು ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆ’

Thu, 05 May 2022 05:47:36  Office Staff   SO NEWS

ಭಟ್ಕಳ: ತಾಲೂಕಿನ ಚೌಥನಿಯ ಕಿರು ಗುಡ್ಡದ ಮೇಲೆ ಸ್ಥಾಪನೆಗೊಂಡಿರುವ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ೨೬ನೇ ವರ್ಷದ ಪ್ರತಿಷ್ಠಾ ವರ್ಧಂತಿ, ಸಾಮೂಹಿಕ ಶನಿಪೂಜೆ ಹಾಗೂ ಸ್ವಯಂವರ ಕಲ್ಯಾಣ ಮಂಟಪದ ಉದ್ಘಾಟನೆ ಸಮಾರಂಭವೂ ಮೇ ೭ ಮತ್ತು ೮ ರಂದು ನಡೆಯಲಿದೆ ಎಂದು ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಎಮ್. ಅಬ್ಬಿಹಿತ್ತಲ್ ಹೇಳಿದರು.

ಅವರು ಇಲ್ಲಿನ ದೇವಸ್ಥಾನದ ನೂತನ ಕಲ್ಯಾಣ ಮಂಟಪದ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಇಲ್ಲಿನ ಕಾಸ್ಮುಡಿ ಹನುಮಂತ ದೇವರ ಹೆಸರೇ ಹೇಳುವಂತೆ ಬೇಡಿ ಬಂದ ಭಕ್ತರಿಗೆ ‘ಕಾಸಿನ ಮುಡಿ’ ಯೇ ಕೈಯಲ್ಲಿ ನೀಡಿ ಕಳಿಸುವ ಆರಾಧ್ಯದೈವನಾಗಿ ನೆಲೆಸಿದ್ದಾನೆ. ಮದುವೆಯೇ ಆಗದೇ ಕೊರಗುವ ಜನಕ್ಕೆ ಚಿಕ್ಕ ಸಂಕಲ್ಪದಿAದ ವರಿಗೆ ‘ಕಂಕಣ’ ಭಾಗ್ಯ ಕೂಡಿ ಬಂದಿರುವುದು, ಜೀವನದಲ್ಲಿ ಸೋತು ‘ಕಾಸಿನ ಮುಡಿ’ಯೇ ನೀಡಿ ಉದ್ದರಿಸುವ ಉದಾಹರಣೆ ಸಹ ಉಂಟು. ಈ ಹಿಂದಿನಿAದೂ ದೇವರಿಗೆ ಪೂಜೆ ಹಾಗೂ ಭಜನೆ ಶಾಸ್ತçಬದ್ದ ರೀತಿಯಲ್ಲಿ ಮಾಡಿಕೊಂಡು ಬಂದಿದ್ದೇವೆ. ದೇವರ ಪೂಜೆ ಪುನಸ್ಕಾರದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಂಡಿದ್ದೇವೆ. ೧೯೯೬ರಲ್ಲಿ ಜೀರ್ಣೊದ್ದಾರವಾದ ಬಳಿಕ ನಮ್ಮಲ್ಲಿನ ಭಕ್ತರಲ್ಲಿ ದೇವಸ್ಥಾನದಿಂದ ಬಡವರ ಅನೂಕೂಲಕ್ಕಾಗಿ ಸ್ವಯಂವರ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಉದ್ದೇಶ ಕಮಿಟಿ ಅವರು ತೀರ್ಮಾನಿಸಲಾಯಿತು. ಕಲ್ಯಾಣ ಮಂಟಪದ ಕಾಮಗಾರಿಯನ್ನು ಕರ ಸೇವೆಯ ಮೂಲಕ ಎಲ್ಲಾ ಕರ ಸೇವಕರು ಆರಂಭಿಸಿಕೊAಡರು. ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಯಾವುದೇ ವೆಚ್ಚವೆಚಿದು ಲೆಕ್ಕಹಾಕದೇ ಇವೆಲ್ಲವೂ ಹನುಮ ದೇವರ ಆರ್ಶೀವಾದ ಹಾಗೂ ನೂರಾರು ಕರ ಸೇವಕರ ನಿಸ್ವಾರ್ಥದಿಂದ ಹಗಲಿರುಳು ದುಡಿದಿರುವ ಪ್ರತಿಫಲವಾಗಿ ಈಗ ಲೋಕಾರ್ಪಣೆಗೆ ಸಿದ್ದವಾಗಿದೆ ಎಂದರು.
ಇದು ಇಲ್ಲಿನ ಎಲ್ಲಾ ಸಮಾಜದವರ ಸಹಕಾರ ಹಾಗೂ ಶ್ರಮದಾನ ಮೂಲಕ ಶರವೇಗದಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಸಮಾವೇಶಗಳು ನಡೆಸುವ ಮೂಲಕ ಭಟ್ಕಳದಲ್ಲಿ ಹೊಸ ಸಾಮಾಜಿಕ ಕ್ರಾಂತಿ ಮಾಡಲು ಇದು ಸದ್ಬಳಕೆಯಾಗಲಿ ಎಂಬುದು ನಮ್ಮೆಲ್ಲರ ಉದ್ದೇಶವಾಗಿದೆ. ಇಲ್ಲಿನ ನಡೆಯಲಿರುವ ಮದುವೆಗಳಿಗೆ ಯಾವುದೇ ಬಾಡಿಗೆ ತೆಗೆದುಕೊಳ್ಳದೇ ಕೇವಲ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ೫ ಸಾವಿರ ನೀಡಿ ಕಲ್ಯಾಣ ಮಂಟಪ ನೀಡಲಿದ್ದೇವೆ. ಇನ್ನು ೨೫ ಸಾವಿರ ರೂ. ನೀಡಿ ಅಜೀವ ಸದಸ್ಯತ್ವ ಪಡೆದುಕೊಂಡಲ್ಲಿ ವರ್ಷದಲ್ಲಿ ಒಂದು ದಿನ ಉಚಿತವಾಗಿ ಕಲ್ಯಾಣ ಮಂಟಪದ ಬಳಕೆಗೆ ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನದ ಸ್ವಯಂವರ ಕಲ್ಯಾಣ ಮಂಟಪದ ದಾನಿ ಪ್ರಕಾಶ ಅರಬೈಲು ಕುಮಟಾ ಮಾತನಾಡಿ ‘ ಎರಡು ದಿನಗಳ ಕಾಲ ನಡೆಯುವ ಸ್ವಯಂವರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಮೇ ೭ ರಂದು ಬೆಳಿಗ್ಗೆ ೬ ಗಂಟೆಯಿAದ ಸಾಮೂಹಿಕ ಪಂಚಾಮೃತ ಅಭಿಷೇಕ, ೯ ಗಂಟೆಗೆ ಶನಿಕಥೆ, ೧೦ ಗಂಟೆಗೆ ಸ್ವಯಂವರ ಕಲ್ಯಾಣ ಮಂಟಪ ಲೋಕಾರ್ಪಣೆಗೊಳ್ಳಲಿದೆ.
ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ ಗಂಟೆಯಿAದ ೨.೩೦ರ ತನಕ ಮಹಾ ಅನ್ನ ಸಂತರ್ಪಣೆ, ಸಂಜೆ ೬ ಗಂಟೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೭ ಗಂಟೆಗೆ ಅಂತರ ಜಿಲ್ಲಾ ಮಟ್ಟದ ಭಜನಾ ಕುನಿತ ಸ್ಪರ್ಧೇ ನಡೆಯಲಿದೆ.
ಮೇ ೮ ಭಾನುವಾರದಂದು ಸಂಜೆ ೬ ಗಂಟೆಗೆ ದೇವಸ್ಥಾನದ ಕಲ್ಯಾಣ ಮಂಟಪದ ಕರಸೇವಕರಿಗೆ, ದಾನಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಲಿದೆ ಎಂದರು.
ಈ ಸಂಧರ್ಬದಲ್ಲಿ ಕಾಸ್ಮುಡಿ ಶ್ರೀ ಹನುಮಂತ ದೇವಸ್ಥಾನದ ಗೌರವಾಧ್ಯಕ್ಷ ಈರಪ್ಪ ಗರ್ಡೀಕರ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮೃತ್ಯುಂಜಯ ಆಚಾರ್ಯ, ಸುಬ್ರಾಯ ನಾಯ್ಕ, ದೇವಸ್ಥಾನದ ಕಮಿಟಿ ಸದಸ್ಯರು ಇದ್ದರು.


Share: