ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ: ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Sat, 05 Dec 2009 15:58:00  Office Staff   S.O. News Service
ಚಿಕ್ಕಬಳ್ಳಾಪುರ ಡಿಸೆಂಬರ್ ೦೫: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ೨೦೦೯-೧೦ನೇ ಸಾಲಿನ ಮಹಿಳಾ ಅಭಿವೃದ್ದಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ೬ ಸಂಸ್ಥೆಗಳಿಗೆ ಹಾಗೂ ೮ ಅರ್ಹ ವ್ಯಕ್ತಿಗಳಿಗೆ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹಿಳೆಯರಿಗೂ ಸಹ ತಲಾ ಒಂದೊಂದರಂತೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಲಾಗುವುದು ವಿವಿಧ ಕ್ಷೇತ್ರಗಳಲ್ಲದೇ ಸಾಹಸ ಪ್ರದರ್ಶಿಸಿ ಹೊರಾಡಿದ ಮಹಿಳೇ, ವೀರ ಮಹಿಳೆ ಪ್ರಶಸ್ತಿಯನ್ನು ಸಹ ನೀಡಲಾಗುವುದು.
  
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐದು ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಸೇವೆ ಸಲ್ಲಿಸಿರುವ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಹವಿರುವವರು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿಯಿಂದ ಅರ್ಜಿಗಳನ್ನು ಡಿಸೆಂಬರ್ ೨೧ ರಂದು ಸಂಜೆ ೫.೩೦ ಗಂಟೆಯೊಳಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬಹುದು. ದೂರವಾಣಿ:೦೮೧೫೬-೨೭೦೮೦೮.
 
ಜಿಲ್ಲಾ ಮಟ್ಟದ ಯುವಜನಮೇಳ

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ೨೦೦೯-೧೦ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಡಿಸೆಂಬರ್ ೧೨ ಮತ್ತು ೧೩ ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ನಂದಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಹಾಗೂ ಗುಂಪು ಸ್ಪರ್ದೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಬಹುದು.  ಅರ್ಹ ಸ್ಪರ್ಧಿಗಳು ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವರ ಹೆಚ್ಚಿನ ಮಾಹಿತಿಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲಿಬ್ರಾಹನ್ ಆಯೋಗದ ವರದಿಯನ್ನು ಜಾರಿಗೊಳಿಸಲು ಡಿ‌ಎಂಎಸ್ ಒತ್ತಾಯ
 
೧೯೯೨ರ ಡಿಸೆಂಬರ್ ೬ ರಂದು ಅಯೋದ್ಯೆಯಲ್ಲಿ ನಡೆದ ಹಿಂದುತ್ವ ಕರಸೇವಕರ ಮುಕವಾಡವಿರುವ ದುಷ್ಕರ್ಮಿಗಳು ಎಸಗಿದ ಬಾಬರಿ ಮಸೀದಿ ದ್ವಂಸ ಹಿಂದುತ್ವದ ಹೆಸರಿನಲ್ಲಿ ನಡೆದ ಚಳುವಳಿಯ ಭಾವೋದ್ವೇಗದಿಂದ ಉಂಟಾದ ಅನಾಹುತವಾಗಿರದೇ ಪೂರ್ವ ಯೋಜಿತ ಶಡ್ಯಂತ್ರವಾಗಿರುವುದನ್ನು ಲಿಬ್ರಾಹನ್ ಆಯೋಗದ ವರದಿಯು ದಾಖಲಿಸಿದೆ  ಈ ವರದಿಯು ಭಾರತದ ಧಾರ್ಮಿಕ ಅಲ್ಪ ಸಂಖ್ಯಾತರ ಆತ್ಮಸ್ಥೈರ್ಯದಿಂದ ಬದುಕುವಂತಹ ಆಶಾಭಾವನೆ ನೀಡಿದೆ ಎಂದು ಅಖಿಲ ಭಾರತ ದಲಿತ ಮತ್ತು ಮೈನಾರಿಟೀಸ್ ಕ್ರಿಯಾ ಸಮಿತಿ(ರಿ)ನ ಪ್ರಧಾನ ಕಾರ್ಯದರ್ಶಿಗಳಾದ  ಖಾಸಿಂ ಸಾಬ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
 
ಆದರೆ ಇದುವರೆಗೂ ಭಾರತದ ಇತಿಹಾಸದಲ್ಲಿ ನಡೆದ ಹಲವಾರು ಕೋಮುಗಲಭೆಗಳ ವರದಿಗಳು ಮೂಲೆಗುಂಪಾದಂತೆ ಈ ವರದಿಯೂ ಸಹ ಆಗದೇ ಸಮಗ್ರವಾಗಿ ಜಾರಿಗೆಯಾಗುವಂತೆ ಮಾಡುವ ಹೊಣೆಗಾರಿಕೆ ಇಂದಿನ ಯು.ಪಿ.ಎ ಕೇಂದ್ರ ಸರಕಾರದ್ದಾಗಿದೆ.
 
ಕೇಂದ್ರ ಸರಕಾರದ ಅವಧಿಯಲ್ಲಿ ಜೆಸ್ಟೀಸ್ ರಾಜೇಂದ್ರ ಸಾಚಾರ್ ವರದಿ, ಜೆಸ್ಟೀಸ್ ರಂಗನಾಥ್ ಮಿಶ್ರ ವರದಿಗಳು ಈಗಾಗಲೇ ಭಾರತದ ಅಲ್ಪ ಸಂಖ್ಯಾತ ಮುಸ್ಲಿಮರು ಶೋಷಣೆಗೆ ಹಾಗೂ ಕೋಮುವಾದಿಗಳ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ಬಹಿರಂಗ ಪಡಿಸಿವೆ. ಆದರೆ ೬೨ ವರ್ಷಗಳ ಸ್ವತಂತ್ರದಲ್ಲಿ ಮುಸ್ಲಿಂರ ಮೇಲೆ ನಡೆದ ಹಿಂದುತ್ವದ ದಾಳಿಗಳು ಇದೇ ಮೊದಲೇನಲ್ಲಾ ಮುಂಬಾಯಿ ಕೋಮುಗಲಭೆಗಳು, ಗುಜರಾತ್ ಹತ್ಯಾಕಾಂಡ ಮೊದಲಾದ ಕೋಮುಗಲಭೆಗಳಿಂದ ಮುಸ್ಲಿಂ ಸಮುದಾಯವು ಅಪಾರ ಪ್ರಾಣ, ಆಸ್ತಿ-ಪಾಸ್ತಿಗಳ ನಷ್ಟಕ್ಕೆ ಒಳಗಾಗುವುದರ ಜೊತೆಗೆ ತಾವು ಹುಟ್ಟಿದ ಈ ಭಾರತದ ನೆಲದಲ್ಲಿ ಅನ್ಯರಾಗಿ, ಪ್ರತ್ಯೇಕ ದ್ವೀಪಗಳಾಗಿ ಬದುಕುವಂತಹ ವಾತಾರಣ ಸೃಷ್ಟಿಯಾಗಿದೆ ಎಂದು ಖಾಸಿಂ ಸಾಬ್ ಅಭಿಪ್ರಾಯ ಪಟ್ಟಿದ್ದಾರೆ.
 
ಇದುವರೆಗೂ ನೀಡಲಾಗಿರುವ ಮುಂಬಾಯಿ ಕೋಮುಗಲಭೆಗಳ ಶ್ರೀ ಕೃಷ್ಣ ಆಯೋಗದ ವರದಿ, ೨೦೦೨ ಗುಜರಾತ್ ಹತ್ಯಾಕಾಂಡದ ಹಲವಾರು ವರದಿಗಳು, ಶಿಫಾರಸ್ಸುಗಳು ಸಂಪೂರ್ಣವಾಗಿ ಜಾರಿಗೆಯಾಗದೆ ಮೂಲೆಗುಂಪಾಗಿರುವುದು ನಗ್ನ ಸತ್ಯ. ಕಾಂಗ್ರೇಸ್ ನೇತೃತ್ವದ ಕೇಂದ್ರ ಸರಕಾರ ಇದರ ಹೊಣೆ ಹೊರಗೆ ಹೊರಬೇಕಾಗುತ್ತದೆ.
 
ಲಿಬ್ರಾಹನ್ ಆಯೋಗದ ವರದಿಯ ಅನುಮೋದನೆಗಳು ಹಾಗೂ ಸರಕಾರದ ’ಕ್ರಮ ಜಾರಿ ವರದಿ’ ಯನ್ನು ಸಮಗ್ರವಾಗಿ ಹಾಗು ತೀವ್ರಗತಿಯಲ್ಲಿ ಜಾರಿಗೆ ಬರುವಂತೆ ಮಾಡುವುದು ಈ ದೇಶದ ಶಾಂತಿ ಸೌಹಾರ್ದತೆ ಹಾಗೂ ಭಾರತದ ಸಂವಿಧಾನದ ಮೂಲ ತಿರುಳಾಗಿರುವ ’ಸೆಕ್ಯೂಲರ್’ ವಾದವನ್ನು ಒಪ್ಪಿರುವ ಎಲ್ಲಾ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ.
 
ಡಿಸೆಂಬರ್-೬ ರಂದು ರಾಜ್ಯದ ಹಲವಾರು ಜನಪರ ಸಂಘಟನೆಗಳು ಲಿಬ್ರಾಹನ್ ಆಯೋಗದ ವರದಿಯನ್ನು ಜಾರಿಗೊಳಿಸಲು ರಾಜ್ಯಾಂದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ನ್ಯಾಯಯುತ ಪ್ರತಿಭಟನೆಗೆ ’ಅಖಿಲ ಭಾರತ ದಲಿತ ಮತ್ತು ಮೈನಾರಿಟೀಸ್ ಕ್ರಿಯಾ ಸಮಿತಿ(ರಿ)’ ಯ ಚಿಕ್ಕಬಳ್ಳಾಪುರ ಜಿಲ್ಲಾ ಘಟಕವು ಬೆಂಬಲವನ್ನು ಈ ಮೂಲಕ ಘೋಷಿಸುತ್ತಿದೆ ಎಂದು ಎ.ಖಾಸಿಂಸಾಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: