ಮೈಸೂರು, ಜನವರಿ ೮: ಕೃಷ್ಣರಾಜಸಾಗರ ಜಲಾಶಯದಿಂದ ಮಳವಳ್ಳಿ ನಾಗಮಂಗಲ, ಬನ್ನೂರು ಮತ್ತು ಟಿ. ನರಸೀಪುರಕ್ಕೆ ಬರುವ ಸೋಮವಾರದಿಂದ ಪ್ರತಿ ತಿಂಗಳು ೨೦ ದಿನಗಳ ಕಾಲ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವ ರಾಮಚಂದ್ರೇಗೌಡ ಹೇಳಿದ್ದಾರೆ.
ನೀರಾವರಿ ಸಲಹಾ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೆ.ಆರ್.ಎಸ್ನಲ್ಲಿ ನೀರಿನ ಸಂಗ್ರಹ ೧೨೩.೫ ಅಡಿ ಇದ್ದು, ಜನವರಿ ೧೧ ರಿಂದ ೨೦ ದಿನಗಳ ಕಾಲ ನೀರು ಬಿಡುವುದರಿಂದ ಜಲಾಶದಲ್ಲಿ ೧೧೯.೧ ಅಡಿಗೆ ಇರಲಿದೆ.
೧೦ ದಿನಗಳ ಕಾಲ ರಜಾನಂತರ ಫೆಬ್ರವರಿ ೧೦ ರಿಂದ ಮಾರ್ಜ್ ೨ ರವೆಗೆ, ನೀರು ಬಿಡಲಾಗುವುದು. ಏಪ್ರೀಲ್ ಮೇ ತಿಂಗಳಲ್ಲಿಯೂ ಸಹ ೨೦ ದಿನಗಳ ಕಾಲ ಕೆ.ಆರ್.ಎಸ್.ನಿಂದ ಕೊನೆ ಹಂತದ ವರೆಗೆ ನೀರು ಹರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಮಂಡ್ಯ ಜಿಲ್ಲಾ ರೈತರ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಅಲ್ಲದೇ ಬತ್ತ, ಕಬ್ಬು ಬಿಟ್ಟು ಇತರ ಬೆಳೆಗಳನ್ನ ಬೆಳೆಯ ಬೇಕು ಎಂದು ಮನವಿಮಾಡಿಕೊಂಡರು. ಕಳೆದ ೧೦ ವರ್ಷಗಳಲ್ಲಿ ಮೊದಲನೇ ಭಾರಿಗೆ ಬೇಸಿಗೆ ಸಮಯದಲ್ಲಿ ಹೆಚ್ಚು ದಿನಗಳ ಕಾಲ ನೀರು ಬಿಡಲು ಸರ್ಕಾರ ತೀರ್ಮಾನಿಸಿರುವುದು ರೈತರಿಗೆ ಸಂತಸ ತಂದಿದೆ ಎಂದರು. ರೈತ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಲ ಗದ್ದೆಗಳಿಗೆ ನೀರು ಬಿಡುವುದರಿಂದ ಬೆಂಗಳೂರು ನಗರ ಸೇರಿದಂತೆ ಆ ಭಾಗದಲ್ಲಿಯ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಸ್ವಷ್ಟಪಡಿಸಿದರು.