ಭಟ್ಕಳ, ಡಿಸೆಂಬರ್ ೨೨: ಇಲ್ಲಿನ ನೌನಿಹಾಲ್ ಶಿಕ್ಷಣ ಸಂಸ್ಥೆಯ ವತಿಯಿಂದ ಬುಧವಾರದಂದು ರಾಜ್ಯಮಟ್ಟದ ರಸಪ್ರಶ್ನೆ ಮತ್ತು ಆಶು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಸಪ್ರಶ್ನೆ ಸ್ಫರ್ದೆಯ ಸಂಚಾಲಕ ಮೌಲಾನ ಉಬೈದುಲ್ಲಾ ನದ್ವಿ ಹಾಗೂ ನೌನಿಹಾಲ್ ಶಿಕ್ಷಣ ಸಮಿತಿಯ ಮುಝಫರ್ ಕೋಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೌಕಿಕ ಶಿಕ್ಷಣ ಸಂಸ್ಥೆಗಳಲ್ಲಿ ಅದ್ಯಾಯನ ಮಾಡುವ ವಿದ್ಯಾರ್ಥಿಗಳಿಗಾಗಿ ಇಸ್ಲಾಮಿಕ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಇಸ್ಲಾಮ್ ಧರ್ಮದ ಕುರಿತು ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದು ಎಂದು ಅವರು ತಿಳಿಸಿದ್ದಾರೆ. ಬೆಳಗ್ಗೆ ೯ ಗಂಟೆಯಿಂದ ಆರಂಭವಾಗುವ ಈ ಸ್ಪರ್ಧೆಯಲ್ಲಿ ರಾಜ್ಯದ್ಯಂತ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದ್ದು ಈಗಾಗಲೆ ಹಲವಾರು ವಿದ್ಯಾರ್ಥಿಗಳು ಭಟ್ಕಳವನ್ನು ತಲುಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರಾತ್ರಿ ೮ ಗಂಟೆಗೆ ನಡೆಯುವ ಬಹಿರಂಗ ಸಭೆ ಕಾರ್ಯಕ್ರಮದಲ್ಲಿ ರಸ್ಪ್ರಪ್ರಶ್ನೆ ಹಾಗೂ ಆಶುಭಾಷಣ ಸ್ಪರ್ಧೆಯ ಅಂತಿಮಾ ಸುತ್ತನ್ನು ನಡೆಸಿ ಅಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು. ಬಹಿರಂಗ ಸಭೆಯಲ್ಲಿ ವಿದ್ವಾಂಸರಿಂದ ಭಾಷಣ ಜರುಗುವುದು. ನಂತರ ಝಿಯಾವುಲ್ ಉಲೂಮ್ ಕಂಡ್ಲೂರಿನ ವಿದ್ಯಾರ್ಥಿಗಳಿಂದ ಆಕರ್ಷಕ ಅಂತಾಕ್ಷರಿ ಕಾರ್ಯಕ್ರಮವು ಜರುಗುವುದು ಎಂದು ಸಂಸಾಲಕರು ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಝರತ್ ಮೌಲಾನ ಸೈಯ್ಯದ್ ಅಷ್ಹದ್ ರಷೀದಿ ವ್ಯೆವಸ್ಥಾಪಕರು ಜಾಮಿಯ ಖಾಸ್ಮಿಯ ಮುರಾದಾಬಾದ್ ವಹಿಸಿಕೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಹಝರತ್ ಮೌಲಾನ ಅಮ್ಮಾರ್ ಸಾಹೇಬ್, ಹಝರತ್ ಮೌಲಾನ ಐಯ್ಯೂಬ್ ನದ್ವಿ ಅಧ್ಯಕ್ಷರು ಅಲ್ ಸುನ್ನಾ ಚಾರಿಟೆಬಲ್ ಟ್ರಸ್ಟ್, ಹಝರತ್ ಮೌಲಾನ ಇಖ್ಬಾಲ್ ನದ್ವಿ ಖಾಜಿ ಜಮಾತುಲ್ ಮುಸ್ಲಿಮೀನ್ ಭಟ್ಕಳ, ಹಝರತ್ ಮೌಲಾನ ಖ್ವಾಜಾ ಮುಈನುದ್ದೀನ್ ಅಕ್ರಮಿ ನದ್ವಿ ಖಾಜಿ ಮರ್ಕಝಿ ಖಲಿಫಾ ಜಮಾತ್ ಭಟ್ಕಳ ಇವರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ