ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ಟಿ ಬಿ ಹರಿಕಾಂತ ಪುನರಾಯ್ಕೆ.

ಪತ್ರಿಕಾ ಭವನ ನಿರ್ವಹಣಾ ಸಮಿತಿಗೆ ಟಿ ಬಿ ಹರಿಕಾಂತ ಪುನರಾಯ್ಕೆ.

Sun, 02 Jul 2023 18:05:28  Office Staff   SO News

ಕಾರವಾರ: ಜಿಲ್ಲಾ ಪತ್ರಿಕಾ ಭವನದ ನಿರ್ವಹಣಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನಗರದ ಪತ್ರಿಕಾಭವನದಲ್ಲಿ ನಡೆದ   ಸಮಿತಿಯ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕರಾವಳಿ ಮುಂಜಾವು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಟಿ.ಬಿ. ಹರಿಕಾಂತ್ ಅವಿರೋಧವಾಗಿ  ಪುನರಾಯ್ಕೆಯಾಗಿದ್ದಾರೆ.

ಸಮಿತಿ ಉಪಾಧ್ಯಕ್ಷರಾಗಿ ಹಿರಿಯ ವರದಿಗಾರ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕಾ ಜಿಲ್ಲಾ ವರದಿಗಾರ ಸುಭಾಶಚಂದ್ರ ಎನ್.ಎಸ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಂದೀಪ ಸಾಗರ ಎಂ.ವಿ ಆಯ್ಕೆಯಾಗಿದ್ದು, ಖಜಾಂಚಿಯಾಗಿ ಪ್ರಜಾವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಗಣಪತಿ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪತ್ರಕರ್ತ ಎಂ.ಪಿ ಕಾಮತ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ  ಪತ್ರಕರ್ತರಾದ ದೀಪಕ್ ಶೆಣೈ, ವಸಂತಕುಮಾರ್ ಕತಗಾಲ್, ಪ್ರಮೋದ್ ಹರಿಕಂತ್ರ, ಶೇಷಗಿರಿ ಮುಂಡಳ್ಳಿ, ನಾಗೇಂದ್ರ ಖಾರ್ವಿ, ‌ ಗಿರೀಶ್ ನಾಯ್ಕ, ನವೀನ್ ಸಾಗರ್, ದರ್ಶನ್ ನಾಯ್ಕ, ಉದಯ್ ಬರ್ಗಿ, ಸುನೀಲ್ ನಾಯ್ಕ, ಸಂದೀಪ್ ಸಾಗರ್‌ ಎಸ್ ಎಸ್, ದೇವರಾಜ್ ನಾಯ್ಕ, ವಾಸುದೇವ ಗೌಡ, ಕಿಶನ್ ಗುರಾವ್, ಪ್ರವೀಣ್, ಭರತ್ ರಾಜ್, ಮಂಜುನಾಥ ಪಟಗಾರ್, ಗಿರೀಶ್ ಬಾಂದೇಕರ್ ಸೇರಿದಂತೆ ಇತರರು ಹಾಜರಿದ್ದರು.


Share: