ಬಂಟ್ವಾಳ, ಜನವರಿ 4: ನರಿಕೊಂಬು ಗ್ರಾಮದ ಮಾಣಿ ಮಜಲು ಎಂಬಲ್ಲಿನಸಾರ್ವಜನಿಕ ಪ್ರದೇಶದಲ್ಲಿ ಅಕ್ರಮವಾಗಿ ಜುಗಾರಿ ಆಟದಲ್ಲಿ ನಿರತರಾಗಿದ್ದ ೪ ಮಂದಿಯನ್ನು ಬಂಟ್ವಾಳ ನಗರ ಪೋಲಿಸರು ಬಂಧಿಸಿದ್ದಾರೆ,
ಶಂಬೂರಿನ ಚಂದ್ರಶೇಖರ ಪೂಜಾರಿ,ನರಿಕೊಂಬುವಿನ ರಮೇಶ್ ಪೂಜಾರಿ,ನೆಹರು ನಗರದ ಪೂವಪ್ಪ ಪೂಜಾರಿ,ಹಾಗೂ ಮಾಣಿ ಮಜಲು ನಿವಾಸಿಗಳಾದ ದಯಾನಂದ ಆಲಿಯಾಸ್ ಜಯ ಬಂಧಿತ ಆರೋಪಿಗಳು. ಬಂಧಿತರಿಂದ ೨೨೧೦ರೂ ನಗದು ವಶ ಪಡಿಸಲಾಗಿದೆ. ನಗರ ಠಾಣಾಧಿಕಾರಿ ಎಂ.ರಫೀಕ್ ತಹಶೀಲ್ದರ್ ನೇತೃತ್ವದಲ್ಲಿ ಈದಾಳಿ ನಡೆದಿದೆ.