ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಗುರುಮಠದ ನೂತನ ಮಹಾದ್ವಾರವನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಉದ್ಘಾಟಿಸಿದರು.
ಶಾಸಕ ಸುನೀಲ್ ನಾಯ್ಕ ಈ ದ್ವಾರಮಂಟಪವನ್ನು ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿದ್ದರು. ಸ್ವಾಮೀಜಿಗಳು ಈ ದ್ವಾರ ಮಂಟಪಕ್ಕೆ ಪೂಜೆ ಸಲ್ಲಸಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ ರನ್ನು ಸ್ವಾಮೀಜಿಗಳು ಶ್ರೀ ಗುರುಮಠ ದೇವಸ್ತನದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಸಾಸಕ ಸುನೀಲ್ ನಾಯ್ಕ, ಪಶ್ವಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅದ್ಯಕ್ಷ ಶ್ರೀಧರ ನಾಯ್ಕ, ಆಡಳಿತ ಮಂಡಳಿಯ ಸದಸ್ಯರಾದ ಭವಾನಿಶಂಕರ ನಾಯ್ಕ, ಮಾಸ್ತಿ ನಾಯ್ಕ, ಎಂ.ಆರ್. ನಾಯ್ಕ. ಕೆ.ಆರ್.ನಾಯ್ಕ, ರಾಘವೇಂದ್ರ ನಾಯ್ಕ, ಮತ್ತಿತರರು ಇದ್ದರು.