ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ: ಕೆರೆಯಲ್ಲಿ ಮುಳುಗಿ ಬಾಲಕನ ಸಾವು

ಮಂಜೇಶ್ವರ: ಕೆರೆಯಲ್ಲಿ ಮುಳುಗಿ ಬಾಲಕನ ಸಾವು

Thu, 14 Jan 2010 14:28:00  Office Staff   S.O. News Service
ಮಂಜೇಶ್ವರ ಜನವರಿ 14 : ಸ್ನೇಹಿತರೊಂದಿಗೆ ಈಜಲೆಂದು ಹೋದ ಶಾಲಾ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೀಯಪದವವು ಬೆಜ್ಜಂಗಳ ಎಂಬಲ್ಲಿ ನಡೆದಿದೆ.
 
ಮೃತ ಬಾಲಕನನ್ನು ಮೀಯಪದವು ಮುಹಮ್ಮದ್ ಎಂಬವರ ಪುತ್ರ ಮೀಯಪದವು ವಿದ್ಯಾವರ್ದಕ ಯು.ಪಿ ಶಾಲೆಯ ೭ ನೆ ತರಗತಿ ವಿದ್ಯಾರ್ಥಿ ನೌಶಾದ್(12) ಎಂದು ತಿಳಿದು ಬಂದಿದೆ. ಇಂದು ಸಂಜೆ ಶಾಲಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲೆಂದು ಹೋದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share: