ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜುಲೈ ಏಳರಂದು ದೂರದರ್ಶನ ಚೆಂದನ ವಾಹಿನಿಯಲ್ಲಿ ಸಂವಾದ

ಜುಲೈ ಏಳರಂದು ದೂರದರ್ಶನ ಚೆಂದನ ವಾಹಿನಿಯಲ್ಲಿ ಸಂವಾದ

Tue, 04 Jul 2023 04:15:56  Office Staff   SO News

ಕಾರವಾರ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಪರಿಧಿಗೆ ಒಳಪಡುವ ಗ್ರಾಹಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸಂವಾದ ನಡೆಸಿದೆ.

 ವಿಜಯಕುಮಾರ್ ರಿಜಿಸ್ಟ್ರಾರ್ ಹಾಗೂ ಆಡಳಿತಾಧಿಕಾರಿಗಳು ಸಂವಾದ ನಡೆಸಿರುವ ಬಗ್ಗೆ ದೂರದರ್ಶನ ಚಂದನ ವಾಹಿನಿಯಲ್ಲಿ  ಜುಲೈ 07 ರಂದು ಸಂಜೆ 6:00 ಗಂಟೆಯಿಂದ 6:30 ವರೆಗೆ ಪ್ರಸಾರ ಮಾಡಲಾಗುತ್ತಿದೆ. ಪಕ್ಷಕಾರರು, ವಕೀಲರು  ಹಾಗೂ ಸಾರ್ವಜನಿಕರು  ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: