ಬೆಂಗಳೂರು, ಜನವರಿ 8: ಕರ್ನಾಟಕ ಅಖಂಡ ಕರ್ನಾಟಕವಾಗಿಯೇ ಉಳಿಯಬೇಕು, ನಾಡು ವಿಭಜಿಸುವ ಯಾವುದೇ ಧ್ವನಿಗಳಿಗೆ ಅವಕಾಶ ನೀಡಬಾರದು ಎಂದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ನ ಮೇರು ಪ್ರಶಸ್ತಿಯಾದ ನೃಪತುಂಗಾ ಸಾಹಿತ್ಯ ಪ್ರಶಸ್ತ್ರಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕನ್ನಡದ ಚಕ್ರವರ್ತಿ ನೃಪತುಂಗನ ಕಾಲದಲ್ಲಿ ಸಂಸ್ಕೃತಿ ಕರ್ನಾಟಕ ರೂಪುಗೊಂಡಿತ್ತು. ಕನ್ನಡ ನಾಡು ಹಾವೇರಿಯಿಂದ ಗೋದಾವರಿಯವರೆಗೆ ವಿಸ್ತಿರಿಸಿದ್ದು, ಅಖಂಡ ಕರ್ನಾಟಕವನ್ನು ರೂಪಿಸಿದ ಕೀರ್ತಿ ರಾಜ ನೃಪತುಂಗನದು. ಹಾಗಾಗಿ, ಕರ್ನಾಟಕವನ್ನು ಅಖಂಡವಾಗಿಯೇ ಉಳಿಸಿಕೊಳ್ಳಬೇಕು ಎಂದರು.
ಕನ್ನಡ ನಾಡಿನ ವಿಭಜನೆ, ಪ್ರತ್ಯೇಕತೆಯ ಮಾತುಗಳು ಕೇಳಿಬರುತ್ತಿವೆ. ಅಖಂಡ ಕರ್ನಾಟಕವನ್ನು ಉಳಿಸಿ, ಬೆಳೆಸುವುದೇ ನೃಪತುಂಗನಿಗೆ ಸಲ್ಲಿಸುವ ಗೌರವ ಎಮದು ಅವರು ಭಾವುರಾಗಿ ನುಡುದರು.