ಭಟ್ಕಳ:ಇಲ್ಲಿನ ಗ್ರಾಮೀಣ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ-1 ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಗ್ರಾಮೀಣ ಠಾಣೆಗೆ ನೂತನ ಪಿ.ಎಸ್.ಐ ಆಗಿ ಸಾಗರ ಮೂಲದ ಶ್ರೀಧರ್ ನಾಯ್ಕ ನೇಮಕಗೊಂಡಿದ್ದಾರೆ.
ಈ ಹಿಂದಿನ ಪಿ.ಎಸ್.ಐ ಭರತ ಕುಮಾರ್ ಅವರು ಉಡುಪಿ ಠಾಣೆಗೆ ವರ್ಗಾವಣೆ ಗೊಂಡಿದ್ದು ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಇವರು ಈ ಹಿಂದೆ ಕುಂದಾಪುರ ಶಂಕರನಾರಾಯಣ ಪೋಲಿಸ್ ಠಾಣೆ ಯಲ್ಲಿ ಕಾರ್ಯನಿರ್ವಹಿಸಿದ್ದು ಈಗ ಭಟ್ಕಳ ಗ್ರಾಮೀಣ ಠಾಣೆಗೆ ನೂತನವಾಗಿ ನೇಮಕವಾಗಿದ್ದಾರೆ.