ಮಂಜೇಶ್ವರ, ಜನವರಿ 31: ಕಾಸರಗೋಡು ಜಿಲ್ಲಾ ಶಿಟೋರ್ಯೋ ಅಸೋಸಿಯೇಶನ್ ಕರಾಟೆ ಶಾಲೆ ಇಂದು ಉದ್ಘಾಟನೆಗೊಂಡಿತು. ವರ್ಕಾಡಿ ಕಳಿಯೂರು ಸಂತ ಮೇರಿಯವರ ಶಾಲೆಯಲ್ಲಿ ವರ್ಕಾಡಿ ಚರ್ಚ್ ಪಾದ್ರಿಗಳಾದ ರೆ.ಫಾ ಡೆನಿಸ್ ಸುವಾರಿಸ್ ರವರಿಂದ ಉದ್ಘಾಟನೆಗೊಂಡಿತು. ಎಂ.ಎಲ್.ಎ. ಸಿ.ಎಚ್. ಕುಂಞುಂಬು, ಮಂಗಳೂರು ಕರಾಟೆ ಅಸೋಸಿಯೇಶನ್ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿ, ಪಂಚಾಯತ್ ಅಧ್ಯಕ್ಷ ಬಿ. ಮೊಹಮ್ಮದ್ ಕುಂಞ, ಜಿಲ್ಲಾ ಪಂಚಾಯತ್ ಸದಸ್ಯ ಡಿ. ಪ್ರಭಾಕರ ಚೌತಾ, ಜಿಲ್ಲಾ ಕರಾಟೆ ಅಸೋಸಿಯೇಶನ್ ಅಧ್ಯಕ್ಷರಾದ ಸಿ.ಕೆ. ಚಿಪ್ಪಾರ್, ಸಿಸ್ಟರ್ ಜ್ಯೂಲಿಯಾನಾ ಪಾಯಸ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ, ವರದಿ: ಆರೀಫ್ ಮಚ್ಚಂಪಾಡಿ, ಮಂಜೇಶ್ವರ