ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಭಾರತ ಎಂದೂ ಒಂದೇ ಧರ್ಮದ ಪ್ರಭಾವಕ್ಕೊಳಗಾಗಿಲ್ಲ - ರಕ್ಷೀದಿ ಪ್ರಸಾದ್

ಸಕಲೇಶಪುರ: ಭಾರತ ಎಂದೂ ಒಂದೇ ಧರ್ಮದ ಪ್ರಭಾವಕ್ಕೊಳಗಾಗಿಲ್ಲ - ರಕ್ಷೀದಿ ಪ್ರಸಾದ್

Fri, 27 Nov 2009 07:08:00  Office Staff   S.O. News Service
ಸಕಲೇಶಪುರ, ನವೆಂಬರ್ 27: ಬಾರತ ದೇಶ ಎಂದೂ ಒಂದು ದರ್ಮದ ಪ್ರಬಾವಕ್ಕೆ ಒಳಗಾಗಿಲ್ಲ ಕಾಲಕಾಲಕ್ಕೆ  ವಿವಿದ ದರ್ಮಗಳ ಪ್ರಭಾವ ಇಲ್ಲಿ ಹೆಚ್ಚಿತ್ತು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರೀಷತ್ ತಾಲ್ಲೂಕು ಅಧ್ಯಕ್ಷ ರಕ್ಷೀದಿ ಪ್ರಸಾದ್ ಹೇಳಿದ್ದಾರೆ. 
 
ಅವರು ಬುದುವಾರ ಪಟ್ಟಣದ ಆಲ್‌ಮೀನ್ ಶಾಲೆಯಲ್ಲಿ ಹಮ್ಮಿಕೋಳ್ಳಲಾಗಿದ್ದ ರಾಷ್ಟ್ರೀಯ ಕೋಮುಸೌಹಾರ್ದತೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ದೇಶದಲ್ಲಿ ಕೇಲವು ಸಂಕುಚಿತ ಮನೂಬಾವನೆ ಹೂಂದಿರವ ಜನರು ದೇಶದಲ್ಲಿ ಕೋಮು ಭಾವನೆಯನ್ನು ಪ್ರಚೋದಿಸುವ  ಮೂಲಕ ದೇಶದಲ್ಲಿ ಆರಾಜಕತೆ ಸೃಷ್ಠಿಗೆ ಕಾರಣರಾಗಿದ್ದಾರೆ, ದೇಶದ ಇತಿಹಾಸ ತಿರುವಿ ಹಾಕಿದರೆ ಯಾವ ಕಾಲ ಘಟ್ಟದಲ್ಲಿ ಯಾವ ದರ್ಮ ದೇಶದಲ್ಲಿ ಪ್ರಭಾವ ಶಾಲಿಯಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ  ಇದನ್ನು ಅರಿತ ಜನರು ಎಂದಿಗೂ ನಾಡಿನಲ್ಲಿ ದರ್ಮದ ಹೆಸರಿನಲ್ಲಿ ಸಾಮರಸ್ಯ ಕದಡುವ ಕೇಲಸ ಮಾಡುವುದಿಲ್ಲ ಇತಿಹಾಸ ಹಾಗು ಯಾವುದೆ ದರ್ಮದ ಬಗ್ಗೆ ಅಲ್ಪ ತಿಳುವಳಿಕೆ ಹೂಂದಿದವರು ಮಾತ್ರ ಕೋಮು ಬಾವನೆ ಕೆದಕುವ ಮೂಲಕ ದೇಶದಲ್ಲಿ ನೇಮ್ಮೆದಿ ಹಾಳುಮಾಡುವ ಕೇಲಸ ಮಾಡುತ್ತಾರೆ ಎಂದರು. 
 
ಪತ್ರಕರ್ತರ ಸಂಘದ ಅಧ್ಯಕ್ಷ ಮೆಹಬೂಬ್ ಮಾತನಾಡಿ ಕೋಮು ದಳ್ಳುರಿಯನ್ನು ತಡೆಯುವ ಕೇಲಸ ಪ್ರತಿಯೂಬ್ಬ ನಾಗರಿಕನ ಕರ್ತವ್ಯವಾಗ ಬೇಕು. ಇತಿಹಾಸದ ಬಗ್ಗೆ ಸಂಫೂರ್ಣ ತಿಳುವಳಿಕಯುಳ್ಳು ಯಾವುದೆ ದರ್ಮದ ವ್ಯಕ್ತಿ ಕೋಮುಬಾವನೆ ಪ್ರಚೋದನೆಗೆ ಬೆಂಬಲ ನೀಡುವುದಿಲ್ಲ ಎಂದರು. ಅಧುನಿಕ ಕಾಲದಲ್ಲಿ ಬದಲಾದ ತಂತ್ರಜ್ಝಾನಾದಿಂದಾಗಿ ವಿಶ್ವವೆ ಕಿರಿದಾಗುತಿದೆ ಆದರೆ ಒಂದೆ ದೇಶದ ಜನರು ದರ್ಮದ ಹೆಸರಲ್ಲಿ ಪರಸ್ವರ ದೂರವಾಗುತಿರವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೇಯದಲ್ಲ ಎಂದರು.
 
ಪುರಸಭ ಸದಸ್ಯ ಜೈ ಬೀಮ್ ಮಂಜು ಮಾತನಾಡಿ ಸಾಮರಸ್ಯವೆ ಜೀವನ ವಿರಸವೆ ಮರಣ ಎಂಬುದನ್ನು ಇಂದಿನ ಜನತೆ ಇತಿಹಾಸ ನೊಡಿ ಕಲಿತಿದ್ದಾರೆ ಆದರೆ ದರ್ಮದ ಹೆಸರಲ್ಲಿ ಕಚ್ಚಾಡವ ಮೂಲಕ ಸಮಾಜದಲ್ಲಿ ಆಶಾಂತಿ ಸೃಷಿಗೆ ಕಾರಣವಾಗುವುದಲ್ಲದೆ ದೇಶದ ಅಬಿವೃದಿ ಕುಂಠಿತಕ್ಕೂ ಕಾರಣರಾಗುತಿದ್ದಾರೆ ಕೋಮುಸೌಹರ್ದತೆಯನ್ನು ಕದಡುವ ಜನರು ಕೋಮು ಸೌಹಾರ್ದತೆಯೆ ಬಗ್ಗೆ ತಿಳುವಳಿಕೆ ಹೂಂದ ಬೇಕು ಎಂದರು. ಕಾರ್ಯಕ್ರಮದಲ್ಲಿ ವಾರ್ತ ಇಲಾಖೆ ಅದಿಕಾರಿ ಪ್ರಕಾಶ್, ಆಲ್ ಮೀನ್ ಶಾಲೆಯ ಮೂಖ್ಯೂಪಾದ್ಯಯ ಖಾಸಿಂಸಾಬ್ ಮುಂತಾದವರು ಉಪಸ್ಥತಿರಿದ್ದರು

Share: