ನವದೆಹಲಿ, ನವೆಂಬರ್ 29: ಎಚ್.ಡಿ. ಚೌಡಯ್ಯ ಪ್ರತಿಷ್ಠಾನ, ಮಂಡ್ಯ ಸಂಸ್ಥೆಯು ಕಳೆದ ನವೆಂಬರ್ 27 ರಂದು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ವಿಶೇಷ ಪ್ರತಿನಿಧಿ ಶ್ರೀ ಬೈಕೆರೆ ನಾಗೇಶ್ ರವರಿಗೆ 2009 ನೇ ಸಾಲಿನ "ಎಚ್.ಡಿ. ಚೌಡಯ್ಯ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ" ಯನ್ನು ನೀಡಿ ಗೌರವಿಸಿತು.
ಪಾರಿತೋಷಕ ಹಾಗೂ ಹತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡ ಪ್ರಶಸ್ತಿಯನ್ನು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಚ್, ಹೊನ್ನಪ್ಪ ಹಾಗೂ ಖಜಾಂಚಿ ಡಾ. ರಾಮಲಿಂಗಯ್ಯನವರು ಹೆಹಲಿಯಲ್ಲಿ ನೀಡಿ ಗೌರವಿಸಿದರು.