ಮಂಗಳೂರು, ನವೆಂಬರ್ 29: ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿ-೨೦೦೯ರ ಚಾಂಪಿಯನ್ಶಿಪ್ ಸಹಿತ ಹಲವು ಪ್ರಶಸ್ತಿಗಳನ್ನು ಮಂಗಳೂರಿನ "ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಮಂಗಳೂರು" ಸಂಸ್ಥೆ ಪಡೆದು ಮಂಗಳೂರಿಗೆ ಕೀರ್ತಿ ತಂದಿದೆ. ನಗರದ ಪಣಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಆಸಕ್ತರಿಗೆ ಕರಾಟೆ ತರಬೇತಿ ನೀಡುತ್ತಾ ಬಂದಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಿ ಜಯಶೀಲರಾದ ತಂಡದ ವಿವರ ಈ ಕೆಳಗಿನಂತಿದೆ:
ಕುಳಿತವರು (ಎಡದಿಂದ) ಅಬ್ದುಲ್ ಖಾದರ್ ಹುಸೈನ್ (ಕೋಚ್), ಶರತ್ ಕುಮಾರ್ ಪಣಿಯೂರು (ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ), ನಿಂತವರು ಮುಹಮ್ಮದ್ ಮುಸ್ತಫಾ, ಮನ್ಸೂರ್ ಚಂದ್ರನಗರ, ಮುಹಮ್ಮದ್ ಅನಿಶ್ (ಒಂದು ಬೆಳ್ಳಿ).
ಫೋಟೋ: ಖಾದರ್ ಕರಾಟೆ