ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕಲ್ಲಿಕೋಟೆ ಕರಾಟೆ ಪಂದ್ಯಾವಳಿಯ ಪ್ರಶಸ್ತಿ ಮಂಗಳೂರಿನ ಮುಡಿಗೆ

ಮಂಗಳೂರು: ಕಲ್ಲಿಕೋಟೆ ಕರಾಟೆ ಪಂದ್ಯಾವಳಿಯ ಪ್ರಶಸ್ತಿ ಮಂಗಳೂರಿನ ಮುಡಿಗೆ

Sun, 29 Nov 2009 14:10:00  Office Staff   S.O. News Service
ಮಂಗಳೂರು, ನವೆಂಬರ್ 29: ಇತ್ತೀಚೆಗೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿ-೨೦೦೯ರ ಚಾಂಪಿಯನ್‌ಶಿಪ್ ಸಹಿತ ಹಲವು ಪ್ರಶಸ್ತಿಗಳನ್ನು ಮಂಗಳೂರಿನ  "ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಮಂಗಳೂರು" ಸಂಸ್ಥೆ ಪಡೆದು ಮಂಗಳೂರಿಗೆ ಕೀರ್ತಿ ತಂದಿದೆ. ನಗರದ ಪಣಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಆಸಕ್ತರಿಗೆ ಕರಾಟೆ ತರಬೇತಿ ನೀಡುತ್ತಾ ಬಂದಿದೆ. 

ಪಂದ್ಯಾವಳಿಯಲ್ಲಿ ಭಾಗವಹಿಸಿ ಜಯಶೀಲರಾದ ತಂಡದ ವಿವರ ಈ ಕೆಳಗಿನಂತಿದೆ: 

ಕುಳಿತವರು (ಎಡದಿಂದ) ಅಬ್ದುಲ್ ಖಾದರ್ ಹುಸೈನ್ (ಕೋಚ್), ಶರತ್ ಕುಮಾರ್ ಪಣಿಯೂರು (ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ, ಎರಡು ಚಿನ್ನ ಮತ್ತು ಎರಡು ಬೆಳ್ಳಿ), ನಿಂತವರು ಮುಹಮ್ಮದ್ ಮುಸ್ತಫಾ, ಮನ್ಸೂರ್ ಚಂದ್ರನಗರ, ಮುಹಮ್ಮದ್ ಅನಿಶ್ (ಒಂದು ಬೆಳ್ಳಿ).
 
ಫೋಟೋ: ಖಾದರ್ ಕರಾಟೆ
 


Share: