ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ದೇವಾಲಯಕ್ಕೆ ಹೊರಟಿದ್ದ ಸೈಕಲ್ ಸವಾರ ಅಪಘಾತದಲ್ಲಿ ವಿಧಿವಶ

ಭಟ್ಕಳ:ದೇವಾಲಯಕ್ಕೆ ಹೊರಟಿದ್ದ ಸೈಕಲ್ ಸವಾರ ಅಪಘಾತದಲ್ಲಿ ವಿಧಿವಶ

Fri, 08 Jan 2010 04:34:00  Office Staff   S.O. News Service

ಭಟ್ಕಳ, ಜನವರಿ ೭: ಮೃತ್ಯು ಹಿಂಬಾಲಿಸಲು ಅತಿವೇಗದ ವಾಹನವೇ ಆಗಬೇಕಿಲ್ಲ, ವಿಧಿ ಯಾವುದೇ ವಾಹನವನ್ನು ಹಿಂಬಾಲಿಸುತ್ತದೆ ಎನ್ನುವುದಕ್ಕೆ ಭಟ್ಕಳದ ಈ ದುರ್ದೈವಿಯೇ ಸಾಕ್ಷಿ.

 

ಭಟ್ಕಳದ ಹಾಡವಳ್ಳಿ ಗ್ರಾಮ ಪಂಚಾಯತ್ ಮಿತಿಯಲ್ಲಿ ಬರುವ ಕೋಣಾರ ಗ್ರಾಮ ನಿವಾಸಿ ನಾರಾಯಣ ಸೋಮಯ್ಯ ಗೋಂಡಾ (32) ಎಂಬುವವರು ತಮ್ಮ ಪುತ್ರಿಯೊಂಗಿದೆ ದೇವಾಯಲಕ್ಕೆ ಹೊರಟಿದ್ದವರು ದಾರಿಯಲ್ಲಿ ಸೈಕಲ್ ಜಾರಿದ ಪರಿಣಾಮವಾಗಿ ಕೆಳಕ್ಕೆ ಬಿದ್ದಿದ್ದರು.

 

ಆದರೆ ರಸ್ತೆಬದಿಯಲ್ಲಿದ್ದ ಕಲ್ಲೊಂದು ತಲೆಗೆ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಉಪಚರಿಸಲಾಯಿತಾದರೂ ವಿಧಿಯಿಂದ ಉಳಿಸಿಕೊಳ್ಳಲಾಗದೇ ಹೋಯಿತು. ಅವರ ೮ ವರ್ಷದ ಪುತ್ರಿ ಸೈಕಲ್ ಹಿಂದೆ ಕುಳಿತಿದ್ದವಳು ಚಿಕ್ಕ ಪುಟ್ಟ ಗಾಯಗಳಗಳೊಂದಿಗೆ ಪಾರಾಗಿದ್ದಾಳೆ.

 

 

ಭಟ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: