ಮಂಗಳೂರು, ಅ.೩೦: ಕೋಮು ಸೌಹಾರ್ದ ಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನ ಗುಂಪುಗಳ ಮುಖಂಡರ ಜೊತೆ ಸಂವಾದ ಶಿಬಿರ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮಂಗಳೂರಿನಲ್ಲಿ ನಡೆದ ಪ್ರಥಮ ಸಭೆ ಯಶಸ್ವಿಯಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ರಾಜ್ಯಾಧ್ಯಕ್ಷ ಖುಸ್ರೋ ಖುರೇಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂದಿನ ತಿಂಗಳ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದದ ಚರ್ಚೆ ನಡೆದಿದೆ. ಡಿಸೆಂಬರ್ನಲ್ಲೂ ಈ ಸಂವಾದ ನಡೆಸಲಾಗುವುದು ಎಂದು ಖುರೇಶಿ ತಿಳಿಸಿದರು.
ಶಿಬಿರದಲ್ಲಿ ‘ಭಯೋತ್ಪಾದನೆ’, ‘ಲವ್ಜಿಹಾದ್’, ‘ಮತಾಂತರ’, ‘ನಿರು ದ್ಯೋಗ’ ಮೊದಲಾದ ವಿಷಯಗಳ ಸಂವಾದ ನಡೆಯಿತು. ಸಂವಾದದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಭಾಗವಹಿಸಿದ ಪ್ರತಿನಿಧಿಗಳಲ್ಲಿ ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್ ಗೋಹತ್ಯೆ ನಿಷೇಧಿಸಬೇಕು, ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಉಪಾಧ್ಯಕ್ಷ ರಶ್ ತಂತ್ರಿ ಮತಾಂತರ ನಡೆಯುತ್ತಿದೆ ಅದನ್ನು ತಡೆಯಬೇಕು, ಆರೆಸ್ಸೆಸ್ ವಿಭಾಗೀಯ ಸಂಚಾಲಕ ಎಂ.ಬಿ.ಪುರಾಣಿಕ್ ಭಯೋತ್ಪಾನೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು, ಜಾಗೃತಿ ಮೂಡಿಸಬೇಕು, ವಿಎಚ್ಪಿಯ ಜಗದೀಶ ಶೇಣವ ಲವ್ಜಿಹಾದ್ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಮೇಯರ್ ದಿವಾಕರ್ ನಿರುದ್ಯೋಗ ಗಂಭೀರ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ಶ್ರಮಿಸಬೇಕಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುರ್ರಶೀದ್ ಝೈನಿ ಭಯೋತ್ಪಾದನೆ ಹಾಗೂ ಗೋಹತ್ಯೆ ವಿಷಯದಲ್ಲಿ ಮುಸ್ಲಿಂ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಜಮಾಅತೆ ಇಸ್ಲಾಮಿ ಹಿಂದ್ನ ಯೂತ್ವಿಂಗ್ ಸಂಚಾಲಕ ಮುಹಮ್ಮದ್ ಕುಂಞಿ ಲವ್ಜಿಹಾದ್ ಮೂಲಕ ಮುಸ್ಲಿಂ ಸಮುದಾಯದ ಮೇಲೆ ಕೋಮುದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಇದರಿಂದ ಸೌಹಾರ್ದಕೆ ಧಕ್ಕೆ ಆಗಲಿದೆ ಎಂದು ತಿಳಿಸಿದರು.
ಮತಾಂತರದ ಹೆಸರಿನಲ್ಲಿ ಮುಸ್ಲಿಮರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಸಲಫಿ ವಿದ್ಯಾರ್ಥಿ ಸಂಘಟನೆಯ ಸಲಾಹುದ್ದೀನ್ ಅಬೂಬಕರ್ ಖಾದರ್ ತಿಳಿಸಿದರು ಎಂದು ವಿವರಿಸಿದ ಖುರೇಶಿ, ಸಂವಾದದಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಬಗ್ಗೆ ಕಾನೂನು ಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುದ್ರೋಳಿ ವಧಾಗೃಹ ಸಮಸ್ಯೆ ಬಗ್ಗೆ ಗಮನ
ಕುದ್ರೋಳಿಯಲ್ಲಿರುವ ಜಾನುವಾರು ವಧಾಗೃಹ್ನ ಮುಚ್ಚುವುದರಿಂದಾಗುವ ಸಮಸ್ಯೆಯ ಬಗ್ಗೆ ಗಮನ ಹರಿಸುವುದಾಗಿ ಖುರೇಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕರ ಪ್ರಭು, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಸಂಚಾಲಕ ರಹೀಂ ಉಚ್ಚಿಲ್ ಉಪಸ್ಥಿತರಿದ್ದರು
ಮುಂದಿನ ತಿಂಗಳ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸೌಹಾರ್ದದ ಚರ್ಚೆ ನಡೆದಿದೆ. ಡಿಸೆಂಬರ್ನಲ್ಲೂ ಈ ಸಂವಾದ ನಡೆಸಲಾಗುವುದು ಎಂದು ಖುರೇಶಿ ತಿಳಿಸಿದರು.
ಶಿಬಿರದಲ್ಲಿ ‘ಭಯೋತ್ಪಾದನೆ’, ‘ಲವ್ಜಿಹಾದ್’, ‘ಮತಾಂತರ’, ‘ನಿರು ದ್ಯೋಗ’ ಮೊದಲಾದ ವಿಷಯಗಳ ಸಂವಾದ ನಡೆಯಿತು. ಸಂವಾದದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಭಾಗವಹಿಸಿದ ಪ್ರತಿನಿಧಿಗಳಲ್ಲಿ ಹಿಂದೂ ಜಾಗರಣ ವೇದಿಕೆಯ ಸತ್ಯಜಿತ್ ಸುರತ್ಕಲ್ ಗೋಹತ್ಯೆ ನಿಷೇಧಿಸಬೇಕು, ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಉಪಾಧ್ಯಕ್ಷ ರಶ್ ತಂತ್ರಿ ಮತಾಂತರ ನಡೆಯುತ್ತಿದೆ ಅದನ್ನು ತಡೆಯಬೇಕು, ಆರೆಸ್ಸೆಸ್ ವಿಭಾಗೀಯ ಸಂಚಾಲಕ ಎಂ.ಬಿ.ಪುರಾಣಿಕ್ ಭಯೋತ್ಪಾನೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು, ಜಾಗೃತಿ ಮೂಡಿಸಬೇಕು, ವಿಎಚ್ಪಿಯ ಜಗದೀಶ ಶೇಣವ ಲವ್ಜಿಹಾದ್ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಮೇಯರ್ ದಿವಾಕರ್ ನಿರುದ್ಯೋಗ ಗಂಭೀರ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ಶ್ರಮಿಸಬೇಕಾಗಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುರ್ರಶೀದ್ ಝೈನಿ ಭಯೋತ್ಪಾದನೆ ಹಾಗೂ ಗೋಹತ್ಯೆ ವಿಷಯದಲ್ಲಿ ಮುಸ್ಲಿಂ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಜಮಾಅತೆ ಇಸ್ಲಾಮಿ ಹಿಂದ್ನ ಯೂತ್ವಿಂಗ್ ಸಂಚಾಲಕ ಮುಹಮ್ಮದ್ ಕುಂಞಿ ಲವ್ಜಿಹಾದ್ ಮೂಲಕ ಮುಸ್ಲಿಂ ಸಮುದಾಯದ ಮೇಲೆ ಕೋಮುದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಇದರಿಂದ ಸೌಹಾರ್ದಕೆ ಧಕ್ಕೆ ಆಗಲಿದೆ ಎಂದು ತಿಳಿಸಿದರು.
ಮತಾಂತರದ ಹೆಸರಿನಲ್ಲಿ ಮುಸ್ಲಿಮರಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಸಲಫಿ ವಿದ್ಯಾರ್ಥಿ ಸಂಘಟನೆಯ ಸಲಾಹುದ್ದೀನ್ ಅಬೂಬಕರ್ ಖಾದರ್ ತಿಳಿಸಿದರು ಎಂದು ವಿವರಿಸಿದ ಖುರೇಶಿ, ಸಂವಾದದಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಬಗ್ಗೆ ಕಾನೂನು ಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುದ್ರೋಳಿ ವಧಾಗೃಹ ಸಮಸ್ಯೆ ಬಗ್ಗೆ ಗಮನ
ಕುದ್ರೋಳಿಯಲ್ಲಿರುವ ಜಾನುವಾರು ವಧಾಗೃಹ್ನ ಮುಚ್ಚುವುದರಿಂದಾಗುವ ಸಮಸ್ಯೆಯ ಬಗ್ಗೆ ಗಮನ ಹರಿಸುವುದಾಗಿ ಖುರೇಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕರ ಪ್ರಭು, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಸಂಚಾಲಕ ರಹೀಂ ಉಚ್ಚಿಲ್ ಉಪಸ್ಥಿತರಿದ್ದರು