ಭಟ್ಕಳ, ಜನವರಿ 15:ತಾಲೂಕಿನ ಮುಂಡಳ್ಳಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ‘ಉದ್ಯೋಗ ಖಾತ್ರಿ’ ಯೋಜನೆಯ ಕಾರ್ಮಿಕ ನಿತ್ಯಾನಂದ ಬಾಗಲ್ ಶನಿವಾರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಇಲ್ಲಿಯ ನೂರಾರು ಕಾರ್ಮಿಕರು ಹಾರೆ, ಗುದ್ದಲಿಯನ್ನು ಬದಿಗಿಟ್ಟು ಮೌನಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯತ ಕಾರ್ಯದರ್ಶಿ ದತ್ತಾತ್ರೇಯ, ಮಂಜು, ಮಾದೇವ ಮುಂತಾದವರು ಉಪಸ್ಥಿತರಿದ್ದರು.