ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೈಂದೂರು: ಪೋಲೀಸರ ಮೇಲೆ ಹಲ್ಲೆ - ದೂರು ದಾಖಲು

ಬೈಂದೂರು: ಪೋಲೀಸರ ಮೇಲೆ ಹಲ್ಲೆ - ದೂರು ದಾಖಲು

Thu, 03 Dec 2009 17:04:00  Office Staff   S.O. News Service
ಬೈಂದೂರು, ಡಿಸೆಂಬರ್ ೩ : ದಿನಾಂಕ ೦೨/೧೨/೦೯ ರಂದು ೨೩:೦೦ ಗಂಟೆಗೆ ಕುಂದಾಪುರ ತಾಲೂಕು ಪಡುವರಿ ಗ್ರಾಮದ ಅಳಿವೆಕೋಡಿ ಎಂಬಲ್ಲಿ ಇರುವ ಶ್ರೀ ರಾಮ ಭಜನಾ ಮಂದಿರದ ಹತ್ತಿರ ಅರಬ್ಬೀ ಸಮುದ್ರದ ಕಿನಾರೆಯಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜುಗಾರಿ ಆಟ ಅಡುತ್ತಿರುವುದಾಗಿ ಠಾಣೆಗೆ ಬಂದ ವರ್ತಮಾನದಂತೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಯೋಗೇಶ್ ಕುಮಾರ್ ಬಿ.ಸಿ ರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋದಾಗ ಆಪಾದಿತರುಗಳಾದ ೧.ಶಿವಯ್ಯ ತಂದೆ: ನಾಗ ಖಾರ್ವಿ ಕೆಂಚನಮನೆ ೨. ಬಾಲನ ಆನಂದ ತಂದೆ: ಸುಬ್ರಾಯ ಮೊಗವೀರ,೩. ಕಾಂಜಿ ರಾಮ೪. ಅಣ್ಣಯ್ಯ ತಂದೆ: ಮಾಚ ಖಾರ್ವಿ ೫. ಮಹೇಶ್ ೬. ಚಂದ್ರ ಕಾಂತ @ ಚಂದ್ರ ತಂದೆ: ಗೋವಿಂದ ಖಾರ್ವಿ ೭. ವೆಂಕಟೇಶ ಖಾರ್ವಿ ತಂದೆ: ಮಾಚ ಖಾರ್ವಿ, ೮. ಮಂಜು ಖಾರ್ವಿ ತಂದೆ: ನಾಗ ಖಾರ್ವಿ, ಒಟ್ಟು ಸುಮಾರು ೬೦ ರಿಂದ ೭೦ ಜನರು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಕೈಯಲ್ಲಿ ದೊಣ್ಣೆ ಹಾಗೂ ಕಲ್ಲುಗಳನ್ನು ಹಿಡಿದು ತಾರು ರಸ್ತೆಯ ಮಧ್ಯದಲ್ಲಿ ಕಲ್ಲುಗಳನ್ನು ಅಡ್ಡ‌ಇಟ್ಟು ಜೀಪು ಮುಂದಕ್ಕೆ ಹೋಗದಂತೆ ತಡೆ‌ಒಡ್ಡಿ, ಪಿರ್‍ಯಾದಿದಾರರನ್ನು ಮತ್ತು ಸಿಬ್ಬಂದಿಯವರನ್ನು ಹಾಗೂ ಇಲಾಖಾ ಜೀಪನ್ನು ಸುತ್ತುವರಿದು, ಇಲಾಖಾ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಪಿರ್‍ಯಾದಿದಾರರಿಗೆ ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ನಾಯಿಗಳು, ಹೊಡೆಯಿರಿ ಕೊಲ್ಲಿರಿ ಎಂದು ಹೇಳಿ ಪಿರ್‍ಯಾದಿದಾರರಿಗೆ ಮತ್ತು ಸಿಬ್ಬಂದಿಯವರಾದ ಪಿ.ಸಿ. ೧೨೨೨ ನೇ ಮೋಹನ್‌ಚಂದ್ರ ಮತ್ತು ಪಿ.ಸಿ. ೧೨೦೪ ನಿತ್ಯಾನಂದ ರವರಿಗೆ ಕಲ್ಲಿನಿಂದ ಹಾಗೂ ದೊಣ್ಣೆಗಳಿಂದ ಹೊಡೆದ ಪರಿಣಾಮ ಎಡಗೈ ಮೊಣ ಗಂಟಿಗೆ, ಎಡ ಕಾಲಿನ ತೊಡೆಗೆ ಹಾಗೂ ಬೆನ್ನಿನ ಎಡ ಭಾಗಕ್ಕೆ ಒಳ ನೋವಾಗಿದ್ದಲ್ಲದೇ, ಸಿಬ್ಬಂದಿಯವರಿಗೆ ತಲೆಗೆ ಕಾಲಿಗೆ ಒಳ ನೋವುವಾಗಿರುತ್ತದೆ. ಹಾಗೂ ಇಲಾಖಾ ಜೀಪಿಗೆ ಶಿಲೆಗಲ್ಲಿನಿಂದ ಹೊಡೆದ ಪರಿಣಾಮ ಜೀಪಿನ ಎದುರಿನ ಗ್ಲಾಸ್, ಬೋನೇಟ್, ಇಂಡಿಕೇಟರ್, ಬಂಪರ್ ಹಾಗೂ ಇತರ ಕಡೆಗಳಲ್ಲಿ ಜಖಂ ಆಗಿರುತ್ತದೆ ಎಂಬುದಾಗಿ ಶ್ರೀ ಯೋಗೇಶ್ ಕುಮಾರ್ ಪೊಲೀಸ್ ಉಪ ನಿರೀಕ್ಷಕರು ಬೈಂದೂರು ರವರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಠಾಣಾ ಅಪರಾಧ ಕ್ರಮಾಂಕ ೨೪೩/೦೯ ಕಲಂ ೧೪೩, ೧೪೭, ೧೪೮, ೩೪೨, ೩೫೩, ೫೦೪, ೫೦೬, ೩೩೨, ೪೨೭, ಜೊತೆಗೆ೧೪೯ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Share: