
ಬೆಂಗಳೂರು, ಮೈಸೂರು, ತುಮಕೂರು, ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ಸುಲ್ತಾನ್ ಬತ್ತೇರಿ ಪೊಲೀಸರಿಗೆ ದರೋಡೆ, ಕೊಲೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಈ ಡಕಾಯಿತರು ಪೊಲೀಸರ ಅತಿಥಿಗಳಾಗಿದ್ದಾರೆ.
ಬೆಂಗಳೂರಿನ ಆರ್.ಪಿ.ಸಿ. ಲೇಔಟ್ ನಿವಾಸಿ ಕಿಶೋರ್(೨೨), ಕೊಡಗು ಜಿಲ್ಲೆ ಶೆಟ್ಟಹಳ್ಳಿ ಗ್ರಾಮದ ನಿವಾಸಿ ಮಹೇಂದ್ರ(೩೦), ಬೆಂಗಳೂರು ನಿವಾಸಿಗಳಾದ ಎಂ. ಚರಣ್(೨೨), ಹೇಮಂತ್ (೨೨), ತುಮಕೂರು ಜಿಲ್ಲೆ ಕುಣಿಗಲ್ನ ಆಶ್ರಯ ಕಾಲನಿ ನಿವಾಸಿ ಮುರಳಿ(೧೮), ಬೆಂಗಳೂರಿನ ಬ್ಯಾಟರಾಯನಪುರದ ಅಮೃತಹಳ್ಳಿ ನಿವಾಸಿ ರಾಜೇಶ್(೨೧) ಎಂಬವರು ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಕಾರು, ಒಂದು ಹೀರೊ ಹೊಂಡಾ ಬೈಕ್, ೩ ಮೊಬೈಲ್, ೬೦ ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ೭೫ ಲ.ರೂ. ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಅಗರ್ವಾಲ್ ತಿಳಿಸಿದರು.
ನಗರದ ನಜರ್ಬಾದ್ನಲ್ಲಿರುವ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಆರೋಪಿಗಳಾದ ಕಿಶೋರ್, ಮಹೇಂದ್ರ ಎಂಬವರು ಎರಡು ತಂಡ ರಚಿಸಿಕೊಂಡು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ದರೋಡೆ ಮಾಡಲು ಯೋಜನೆ ಸಿದ್ಧಪಡಿಸುತ್ತಿದ್ದು ಕಿಶೋರ್ ೨೦೦೪ ರಲ್ಲಿ ಮಲೇಷಿಯಾದಲ್ಲಿ ನಡೆದ ಸರಣಿ ಕ್ರಿಕೆಟ್ ಪಂದ್ಯದಲ್ಲಿ ಸರಣಿ ಪ್ರಶಸ್ತಿ ಪಡೆದಿದ್ದ. ಅಷ್ಟೇ ಅಲ್ಲದೆ ಹಲವಾರು ದೇಶಗಳಲ್ಲಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದ ಎಂದು ತಿಳಿಸಿದರು.
ಕಳೆದ ತಿಂಗಳು ಕೊಡಗಿನ ಮೋಹನ್ ಕುಮಾರ್ ಹಾಗೂ ತುಷಾರ್ ಎಂಬವರ ಅಪಹ ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಕಾರರ ಪತ್ತೆಗಾಗಿ ರಚಿಸಿದ ತಂಡ ದರೋಡೆ ಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಎಲ್ಲರನ್ನೂ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೊಪ್ಪಿಸಲಾಗಿದೆ. ಇದುವರೆಗೂ ಈ ತಂಡದಲ್ಲಿ ೧೪ ಆರೋಪಿಗಳನ್ನು ಬಂಧಿಸಲಾ ಗಿದ್ದು, ಉಳಿದವರ ಬಂಧನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಎ.ಸಿ.ಪಿ. ಸುರೇಶ್ ಇನ್ಸ್ಪೆಕ್ಟರ್ ಮಹ ದೇವ್, ಜಯಕುಮಾರ್, ಅರುಣ್, ನಾಗೇ ಗೌಡ, ಗುರುಪ್ರಸಾದ್, ಧನಂಜಯ ಕುಮಾರ್ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ರವಿಕಾಂತೇ ಗೌಡ, ರಾಜೇಂದ್ರ ಪ್ರಸಾದ್, ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.