ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಮಂಜರಾಬಾದ್ ತಾಲ್ಲೂಕಿನ ಮಹಾನುಭಾವರು - ಕೃತಿ ಬಿಡುಗಡೆ

ಸಕಲೇಶಪುರ: ಮಂಜರಾಬಾದ್ ತಾಲ್ಲೂಕಿನ ಮಹಾನುಭಾವರು - ಕೃತಿ ಬಿಡುಗಡೆ

Mon, 21 Dec 2009 16:16:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 21:ಯಾವ ದೇಶದಲ್ಲಿ ಪೂರ್ವಿಕರ ಹಾಗೂ ಇನ್ನಿತರ ಹಳೆಯ ನೆನಪುಗಳ ಬಗ್ಗೆ ಮನುಷ್ಯ ತನ್ನ ನೆನಪು ಕಳೆದುಕೊಳ್ಳುತ್ತಾನೋ ಅವನು ಇತಿಹಾಸದ ಚರಿತ್ರೆಯನ್ನು ಕಳೆದುಕೊಳ್ಳುತ್ತಾನೆ ಎಂದು ಖ್ಯಾತ ಸಾಹಿತಿಗಳಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಿಸಿದರು.
 
ಭಾನುವಾರ ಪಟ್ಟಣದ ಶ್ರೀ ಗುರುವೇಗೌಡರ ಕಲ್ಯಾಣಮಂಟಪದಲ್ಲಿ ನಡೆದ ಮಂಜರಾಬಾದ್ ತಾಲ್ಲೂಕಿನ ಮಹಾನುಭಾವರು ಕೃತಿ  ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ವಿಶ್ಲೇಷಕರಾಗಿ ಮಾತನಾಡಿದ ಅವರು, ತಾಲ್ಲೂಕಿಗೆ ಸಾಂಸ್ಕ್ರತಿಕ ಅನನ್ಯತೆಯನ್ನು ತಂದು ಕೊಟ್ಟಿರುವ ಪೂರ್ವಿಕರ ಬಗ್ಗೆ ವಿವರವಾಗಿ ಬರೆದಿರುವುದು ಪ್ರಶಂಸನೀಯವಾಗಿದ್ದು, ಸಾಂಸ್ಕ್ರತಿಕ ದೃಷ್ಠಿಕೋನದಿಂದ ಈ ಪುಸ್ತಕ ಪ್ರಮುಖವಾಗುತ್ತದೆ. ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲು ಇಂತಹ ಪೂರ್ವಿಕರ ಪರಿಚಯದ ಪುಸ್ತಕಗಳು ಬರುವ ಮೂಲಕ ಸಮಾಜಕ್ಕೆ ಕೊಡುಗೆ ಕೊಟ್ಟವರಿಗೆ ಗೌರವ ನೀಡಬೇಕಿದೆ ಎಂದ ಅವರು, ಈ ಪುಸ್ತಕ ಓದಿದ ನಂತರ ನನಗೆ ಲೇಖಕರ ಮೇಲೆ ಪ್ರೀತಿ ಮತ್ತು ಗೌರವ ಉಂಟಾಯಿತು ಎಂದರು.
 
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಚ್.ಎಮ್. ವಿಶ್ವನಾಥ್, ತಮ್ಮ ನಾಡಿನ, ದೇಶದ ಹಾಗೂ ಪೂರ್ವಿಕರ ಬಗ್ಗೆ ಯಾರು ಅಭ್ಯಾಸ ಮಾಡುವುದಿಲ್ಲ ಹಾಗೂ ತಿಳಿದುಕೊಳ್ಳುವುದಿಲ್ಲವೋ ಅಂತಹವರಿಂದ ಹೊಸ ಇತಿಹಾಸ ಮತ್ತು ನವಸಮಾಜದ ನಿರ್ಮಾಣ ಸಾದ್ಯವಿಲ್ಲ ಎಂದ ಅವರು, ನಮ್ಮೂರಿನ ಪೂರ್ವಿಕರ ಬಗ್ಗೆ ಪುಸ್ತಕ ಬರೆಯುವ ಮೂಲಕ ಚಂದ್ರಶೇಖರ್ ಧೂಳೇಕರ್ ನಮ್ಮೂರಿನ ಇತಿಹಾಸದಲ್ಲಿ ದಾಖಲಾಗಿದ್ದಾರೆ ಎಂದರು.
 
ಲೇಖಕಿ ಡಾ.ಉಮಾದೇವಿ ಮಾತನಾಡಿ, ಚಂದ್ರಶೇಖರ್ ಧೂಳೇಕರ್ ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದರು ಅನ್ನಿಸುತ್ತೆ ಹಾಗಾಗಿ ಇವರು ನಮ್ಮ ತಾಲ್ಲೂಕಿನ ಪೂರ್ವಿಕರ ಇತಿಹಾಸವನ್ನು ತೆರೆದಿಟ್ಟಿದ್ದಾರೆ. ಯಾವುದೆ ಡಾಕ್ಟರೇಟ್ ಕೃತಿಗಳಿಗಿಂತ ಈ ಪಯಸ್ತಕ ಕಡಿಮೆಯಿಲ್ಲ ಎಂದರು.
 
ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ. ಆರ್ ಗುದೇವ್, ಇಲ್ಲೆ ಹುಟ್ಟಿ ಬೆಳೆದ ನಾವ್ಯಾರು ಮಾಡದಂತ ಕೆಲಸವನ್ನು ಚಂದ್ರಶೇಖರ್ ಧೂಳೇಕರ್ ಈ ಪುಸ್ತಕ ಬರೆಯುವ ಮೂಲಕ ಮಾಡಿದ್ದಾರೆ. ಹಾಗೂ ನಮ್ಮ ಪೂರ್ವಿಕರಿಗೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.
 
ಸ್ಥಳೀಯ ಶಾಸಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನತಾಮಾಧ್ಯಮ ಪತ್ರಿಕೆ ಸಂಪಾದಕ ಆರ್.ಪಿ ವೆಂಕಟೇಶಮೂರ್ತಿ, ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಪಿ ಕಾಂತರಾಜ್, ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ ಬ್ಯಾಕರವಳ್ಳಿ ಜಯರಾಜ್, ನಿರಂತರ ಪ್ರಕಾಶನದ ಪ್ರವೀಣ್ ಜಗಾಟ, ಪುರಸಭೆ ಅಧ್ಯಕ್ಷ ಯಾದ್ಗಾರ್ ಇಬ್ರಾಹಿಂ  ಸಭೆಯನ್ನದ್ದೇಶಿಸಿ ಮಾತನಾಡಿದರು.
 
ಕಾರ್ಯಕ್ರಮದಲ್ಲಿ ಕೃತಿ ಲೇಖಕ ಚಂದ್ರಶೇಖರ್ ಧೂಳೇಕರ್ ರವರನ್ನು ಸನ್ಮಾನಿಸಲಾಯಿತು. ಪುಸ್ತಕದಲ್ಲಿ ಬರುವ ೬೩ ಮಹಾನುಭಾವರ ಕುಟುಂಭದ ಸದಸ್ಯರನ್ನು ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಲಾಯಿತು.
 
ಕಾರ್ಯಕ್ರಮದಲ್ಲಿ, ವಿಚಾರವಾದಿ ಲೇಖಕರಾದ ಜ.ಹೊ.ನಾರಾಣಸ್ವಾಮಿ, ಬೆಕ್ಕನಳ್ಳಿ ನಾಗರಾಜ್, ಎಚ್. ಪಿ ಲಕ್ಕಪ್ಪ, ಶಾರದ ಗುರುಮೂರ್ತಿ, ಚನ್ನವೇಣಿ ಎಮ್.ಶೆಟ್ಟಿ, ಪ್ರಕಾಶ್ ಧನಾವತ್, ಲಕ್ಷ್ಮಣ್ ಬಳೂಟಿಗಿ, ಲಕ್ಷ್ಮಣ್ ಕೀರ್ತಿ, ಜೈ ಭೀಮ್ ಮಂಜು, ಉಪಸ್ಥಿತರಿದ್ದರು. ಪಾಪಣ್ಣ ಸ್ವಾಗತಿಸಿದರೆ, ಉಮಾದೇವಿ ನಿರೂಪಿಸಿದರು.  


Share: