ಕಾರವಾರ :- ಜಿಲ್ಲೆಯಲ್ಲಿ 2023-24 ನೇ ಸಾಲಿಗಾಗಿ ರೇಷ್ಮೆ ಇಲಾಖೆಯಿಂದ ರೇಷ್ಮ ನೂಲ ಬಿಚ್ಚಾಣಿÂಕೆ ಯಂತ್ರೋಪಕರಣಳಾದ ಚರಕಾ, ಮಲ್ಟಿಎಂಡ್, ಕಾಟೇಜ್ ಬೇಸಿನ್, ಸೋಲಾರ ವಾಟರ್ ಹೀಟರ್, ಬಾಯ್ಲರ್, ಜನರೇಟರ್, ಹೀಟ ರಿಕವರಿ ಯೂನಿಟ್, ಖರೀದಿಗೆ ಹಾಗೂ ಶೆಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ,
ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಉಳ್ಳವರು ಸೆ. 15 ರೊಳಗಾಗಿ ಅರ್ಜಿಯನ್ನು ರೇಷ್ಮೆ ಸಹಾಯಕ ನಿರ್ದೇಶಕರು ಗೂಡಿನ ನಂತರ ಚಟುವಟಿಕೆ ರಾಯಾಪುರ (ಧಾರವಾಡ) ದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 7892084048, 9448862276 ನ್ನು ಸಂಪರ್ಕಿಸಬಹುದು ಎಂದು ಗೂಡಿನ ನಂತರ ಚಟುವಟಿಕೆ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.