ಮಂಜೇಶ್ವರ:ಇತಿಹಾಸ ಪ್ರಸಿದ್ದವಾದ ಬಾಬರೀ ಮಸೀದಿಯನ್ನು ಸಂಘಪರಿವಾರ ಕರಸೇವಕರು ಆಡಳಿತಾಧಿಕಾರಿಗಳ ಮೌನ ಸಮ್ಮತಿಯೊಂದಿಗೆ ಧ್ವಂಸಗೊಳಿಸಿ ಸಾರ್ವಬೌಮತೆಯ ಜಾತ್ಯಾತೀತೆಯ ಕಗ್ಗೊಲೆ ನಡೆಸಿ ಮಸಿ ಬಳೆದಿದೆ ಎಂದು ಪಿ.ಡಿ.ಪಿ ಆರೋಪಿಸಿದೆ.
ಡಿಸಂಬರ್ ೬ ರಂದು ನಡೆದ ಕರಾಳ ನೆನಪುಗಳನ್ನು ಮರೆಯದಿರಲು ಪಿ.ಡಿ.ಪಿ.ಡಿಸಂಬರ್ ೫ ಮತ್ತು ೬ ರಂದು ಕರಾಳ ದಿನವನ್ನಾಗಿ ಆಚರಿಸಲು ಆಹ್ವಾನ ವಿತ್ತಿದೆಯೆಂದು ಪಿಡಿಪಿ ನೇತಾರರಾದ ಎಸ್.ಎಂ.ಬಷೀರ್ ರವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.ಡಿಸಂಬರ್ ೫ ಮತ್ತು ೬ ರಂದು ರಾಜ್ಯದ ೧೫ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ಹಮ್ಮಿ ಕೊಂಡು ಪಕ್ಷವು ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಬಬರೀ ಧ್ವಂಸದ ಡೋಕುಮೆಂಟರಿಯನ್ನು ಪ್ರದರ್ಶಿಸಲಿದೆ ಎಂದು ಅವರು ತಿಳಿಸಿರುತ್ತಾರೆ.
ವರದಿ: ರಹಿಮಾನ್ ಉದ್ಯಾವರ ಸ್ಟ್ರೀಂಜರ್