ಭಟ್ಕಳ, ಜನವರಿ 15: ಇಂದು ಸೂರ್ಯಗ್ರಹಣದ ವೇಳೆ ಭಟ್ಕಳದ ಪ್ರಮುಖ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಟ್ಕಳ ನಾಗರಿಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಪ್ರವಾದಿ ಮೊಹಮ್ಮದ್ (ಸ) ರ ಕಾಲದಲ್ಲಿಯೂ ಗ್ರಹಣ ಸಂಭವಿಸಿದಾಗ ಮೂಢನಂಬಿಕೆಗಳಿಗೆ ಶರಣಾಗದೇ ಕೇವಲ ಪ್ರಾರ್ಥಿಸಿರಿ ಎಂದು ಪ್ರವಾದಿಯವರು ನೀಡಿದ್ದ ಕರೆಯನ್ನು ವಿಶ್ವದ ಮುಸ್ಲಿಮರು ಇಂದಿಗೂ ಪರಿಪಾಲಿಸುತ್ತಾರೆ.
ಚಿತ್ರ, ವರದಿ: ಸಾಹಿಲ್ ವರದಿಗಾರರು, ಭಟ್ಕಳ