ಬಾಣಾವರ-ಡಿ-10. ವ್ಯಾಪಾರ ಮಾಡುವುದರಲ್ಲಿಯೂ ಅನುಭವಬೇಕು ಮತ್ತು ದೊಡ್ಡ ಬಂಡವಾಳ ಹಾಕಿ ಸಾಲಕೊಟ್ಟರೆ ಹಣಬರುವುದೇ ಇಲ್ಲವೆಂದು ಆರ್.ಮಹಾಲಿಂಗಪ್ಪ ಹೇಳಿದರು.
ಸ್ಥಳೀಯ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಬಾಣಾವರ ಮತ್ತು ಹಿರಿಯರು ಕ್ಲಸ್ಟರ್ ಮಟ್ಟದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಂದಿನಿಂದಲೇ ವ್ಯಾಪಾರ ಆನುಭವ ಇದ್ದರೆ ಒಳ್ಳೆಯದು, ಆರು ತಿಂಗಳಿಗೊಮ್ಮೆ ಇಂತಹ ಸಂತಮೇಳ ಎಂದರು.
ಶಿಕ್ಷಣ ಸಂಯೋಜಕ ಎಲ್.ರಾಮಚಂದ್ರಚಾರ್ ಪ್ರಾಸ್ತಾವಿಕ ಭಾಷಣ ಮಾಡಿ, ಮಕ್ಕಳಲ್ಲಿ ವ್ಯಾಪಾರ ಮನೋಭಾವನೆ ಬೆಳೆದು ವ್ಯವಹಾರದ ಜ್ಞಾನ ವೃದ್ಧಿಯಾಗಬೇಕು ಸರ್ವಶಿಕ್ಷಣ ಬಂದ ಮೇಲೆ ನಲಿ,ಕಲಿ ಮತ್ತು ವಿಜ್ಞಾನದ ಬಗ್ಗೆ ಹೆಚ್ಚು ತಿಳುವಳಿಕೆ ನೀಡುತ್ತಿದೆ. ವಿಜ್ಞಾನದ ವಸ್ತುಪ್ರದರ್ಶನ ವಿದೆ ಇಲ್ಲಿ ಬಹುಮಾನ ಪಡೆದವರು ತಾಲ್ಲೂಕು ಮಟ್ಟಕ್ಕೆ ಹೋಗುತ್ತಾರೆ ಎಂದರು.
ಶಿಕ್ಷಕ ಪ್ರತಿನಿಧಿ ಗಂಗಾಧರ ಶೆಟ್ಟಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳ ದೈಹಿಕ ಶಿಕ್ಷಣಕ್ಕೂ ಒತ್ತು ಕೊಡುತ್ತಿರಬೇಕು. ವ್ಯಾಪಾರದಲ್ಲಿ ನುರಿತ ಗಣಿತದ ಬಗ್ಗೆಯೂ ಅವರಿಗೆ ಮನವರಿಕೆ ನೀಡಬೇಕು ಎಂದರು.
ಸ್ಥಳೀಯ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಮಲ್ಲಿಕಾರ್ಜುನ ಮಾತನಾಡಿ ಮಕ್ಕಳಲ್ಲಿ ವ್ಯಾಪಾರದ ಮನೋಭಾವ ಬೆಳೆಯುತ್ತಿದೆ. ನೋಡಿಕಲಿ ಮಾಡಿ ಕಲಿ ಶಿಕ್ಷಕರು ಮಕ್ಕಳ ಮನೋಭಾವನೆಯನ್ನು ಅರ್ಥಮಾಡಿಕೊಂಡು ಶಿಕ್ಷಣಕೂಟ ಕೊಡಿ ಎಂದರು.
ಕೋಡಿ ಮಠ ಪ್ರೌಢಶಾಲೆ ಶಿಕ್ಷಕ ಮಲ್ಲೇಶಪ್ಪ, ಶಿಕ್ಷಕಿ ಎಸ್.ಕೆ.ಜ್ಯೋತಿ ಮಾತನಾಡಿದರು.
ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ನಾಗೇಂದ್ರ ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ಈಗಿನಿಂದಲೇ ಲಾಭ ನಷ್ಟದ ಬಗ್ಗೆ ತಿಳಿಸಬೇಕು. ಅವರೂ ಬುದ್ಧಿ ವಂತರಾಗಬೇಕು ಎಂದರು.
ಮು.ಶಿ. ಶಿಕ್ಷಕ ಆರ್,ಲಕ್ಷ್ಮಣ್ಣ ಕೆ.ಎಸ್.ರಂಗನಾಥ, ವೈದ್ಯ ಪರೇಮಾನಂದ ಮತ್ತಿತರರು ಉಪಸ್ತಿತರಿದ್ದರು. ಶಿಕ್ಷಕಿ ಪುಷ್ಪಲತಾ ಪ್ರಾರ್ಥಿಸಿದರು. ಹೆಚ್.ಚನ್ನಯ್ಯ ವಂದಿಸಿದರು. ಶಿಕ್ಷಕ ಶ್ರೀಧರ ವಂದಿಸಿದರು. ಶಿಕ್ಷಕ ಚಲುವಮೂರ್ತಿ, ವಂದಿಸಿದರು.
ಮಕ್ಕಳ ಸಂತೆ ನಿಜವಾದ ಸಂತೆಗಿಂತ ಬಹಳ ಜೋರಾಗಿ ನಡೆದು ಜನರ ಮೆಚ್ಚುಗೆ ಗಳಿಸಿತು. ವಿವಿಧ ವಸ್ತುಗಳನ್ನು ಮಾರುತ್ತಿದ್ದ ಮಕ್ಕಳ ವ್ಯವಹಾರ ಕೌಶಲ್ಯ ನೋಡಿ ಪಾಲಕರು ಸಂತಸ ಪಟ್ಟರು. ಸಂತೆಯಲ್ಲಿ ೫೦೦ಕ್ಕೂ ಹೆಚ್ಚು ಮಕ್ಕಳು ಗ್ರಾಮಾಂತರ ರೈತರು ಭಾಗವಹಿಸಿದ್ದರು.
*********
ಆಲೋಪತಿಯಿಂದ ಆಗದ್ದು ಆಯುರ್ವೇದದಿಂದ ಆಗುವುದು:
ಆಧುನಿಕ ಅಲೋಪತಿ ವೈದ್ಯಕೀಯದಿಂದ ಗುಣಪಡಿಸಲಾದ ಅನೇಕ ಕಾಯಿಲೆಗಳನ್ನು ನಮ್ಮ ಆಯುರ್ವೇದದ ಒಂದು ಭಾಗವಾಗಿರುವ ಪಾರಂಪರಿಕ ನಾಟಿ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಮಲ್ಲಪ್ಪ ಪ್ರತಿಪಾದಿಸಿದ್ದಾರೆ.
ಹಾಸನ ತಾಲ್ಲೂಕು ಅನುಗನಾಳು ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ ಟ್ರಸ್ಟ್ ವತಿಯಿಂದ ಪಾರಂಪರಿಕ ನಾಟಿ ವೈದ್ಯ ಪರಿಷತ್ ಜಿಲ್ಲಾ ಘಟಕದ ಸಹಯೋಗದೊಂದಿಗೆ ಇತ್ತೀಚೆಗೆ ಬಿಸಿಆರ್ಟಿ ಆವರಣದಲ್ಲಿ ಕರೆಯಲಾಗಿದ್ದ ಜಿಲ್ಲೆಯ ಪಾರಂಪರಿಕ ನಾಟಿ ವೈದ್ಯರ ದ್ವೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜನರಿಗೆ ಈ ಪದ್ಧತಿಯತ್ತ ಆಸಕ್ತಿ ಹೆಚ್ಚುತ್ತಿದ್ದು, ನಾಟಿ ಔಷಧಿಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಹಾಗೂ ಕಾಯಿಲೆಯೂ ಶಾಶ್ವತವಾಗಿ ದೂರವಾಗುತ್ತದೆ ಎಂಬ ಅರಿವು ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪೂರ್ವಿಕರಿಂದ ಬಳುವಳಿಯಾಗಿ ಪ್ರದೇಶಗಳಲ್ಲಿ ಈಗಲೂ ಹಲವಾರು ನಾಟಿ ವೈದ್ಯರು ಗಿಡ ಮೂಲಿಕೆಗಳ ಔಷಧಿಯನ್ನು ರೋಗಿಗಳಿಗೆ ಉಚಿತವಾಗಿ ಕೊಡುತ್ತಿದ್ದಾರೆ. ಪಾರಂಪರಿಕ ನಾಟಿ ವೈದ್ಯ ಪರಿಷತ್ ಹಾಗೂ ಬಿಸಿಆರ್ಟಿ.ಯಂತಹ ಸಂಸ್ಥೆಗಳು ಇಂತಹ ವೈದ್ಯರನ್ನು ಗುರುತಿಸಿ ಸಂಘಟಿಸುವ ಕೆಲಸ ಮಾಡುತ್ತಿವೆ. ಜತೆಗೆ ನಾಟಿ ವೈದ್ಯ ಪದ್ಧತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಲು ಸರ್ಕಾರವೂ ಮುಂದೆ ಬರಬೇಕು. ಅರ್ಥಿಕವಾಗಿ ಹಿಂದುಳಿದಿರುವ ನಾಟಿ ವೈದ್ಯರಿಗೆ ಸೂಕ್ತ ನೆರವು ನೀಡುವತ್ತಲೂ ಸರ್ಕಾರ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.
ಪಾರಂಪರಿಕ ನಾಟಿ ವೈದ್ಯ ಪರಿಷತ್ ರಾಜ್ಯ ನಿರ್ದೇಶಕ ಹಾಗೂ ಬಿ.ಸಿ.ಆರ್.ಟಿ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಈ ನಾಟಿ ಪದ್ಧತಿಯಂತೆ ಔಷಧಿ ನೀಡುತ್ತಿರುವವರು ಇದ್ದಾರೆ. ಇವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಹಣಕಾಸಿನ ಅಡಚಣೆಯಿದ್ದು, ಸರ್ಕಾರ ಆರ್ಥಿಕವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಗತಿಪರ ಸಾವಯವ ಕೃಷಿಕ ಬ್ಯಾಡರಹಳ್ಳಿ ರವಿಶಂಕರ್ ಮಾತನಾಡಿ, ನಾಟಿ ವೈದ್ಯರ ಸಭೆಯ ಔಚಿತ್ಯವನ್ನು ಪ್ರಶಂಸಿಸಿದರು.
ಅಲ್ಲದೆ ತಾವು ತಯಾರಿಸುತ್ತಿರುವ ಹುತ್ತದ ಮಣ್ಣಿನ ಮೈಸೋಪು, ನಾಟಿ ಹಸುವಿನ ಬೆರಣಿ ಬೂದಿಯ ಹಲ್ಲುಪುಡಿ, ತಲೆ ನೋವು ನಿವಾರಕ ಮತ್ತಿತರ ಸ್ವಯಂಕೃತ ಔಷಧಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ, ವಿವರಣೆ ನೀಡಿದರು.
ಅಧ್ಯಕ್ಷತೆಯನ್ನು ನಾಟಿ ವೈದ್ಯರ ಸಮಿತಿ ಅಧ್ಯಕ್ಷ ಹಾಗೂ ಹಿರೇಸಾದರಹಳ್ಳಿಯ ಹಿರಿಯ ನಾಟಿ ವೈದ್ಯ ಪ್ರಸನ್ನಕುಮಾರ್ ವಹಿಸಿ, ನಾಟಿ ವೈದ್ಯ ಪದ್ಧತಿಯ ಮಹತ್ವ ಕುರಿತು ಮಾತನಾಡಿದರು. ಬಿಸಿಆರ್ಟಿ ಟ್ರಸ್ಟಿ ಕುಮಾರಸ್ವಾಮಿ ಹಾಜರಿದ್ದರು.
ಯೋಗೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಬಸವರಾಜು ಸ್ವಾಗತಿಸಿ, ವಂದಿಸಿದರು. ಅಕ್ಟೋಬರ್ನಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಾರಂಪರಿಕ ನಾಟಿ ವೈದ್ಯರ ಸಮ್ಮೇಳನದಲ್ಲಿ ಭಾಗವಹಸಿದ್ದ ಜಿಲ್ಲೆಯ ನಾಟಿ ವೈದ್ಯರಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಚುಟುಕು ಸಾಹಿತ್ಯದಲ್ಲಿ ತ್ರಿವಿಕ್ರಮನಾಗಿ ಕಾಣುವ ದೇ.ಜ.ಗೌ.
ಹಾಸನ-ಡಿ-೯. ಚುಟಕ ಸಾಹಿತ್ಯ ಪ್ರಾಕಾರದಲ್ಲಿ ಹಿರಿಯ ಸಾಹಿತಿ ದೇ.ಜ.ಗೌ.ಅವರು ತ್ರಿವಿಕ್ರಮನಾಗಿ ಕಾಣುತ್ತಾರೆ ಎಂದು ಶ್ರೀಮತಿ ಪ್ರೇಮಕುಮಾರಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಗರದ ರಂಗೋಲಿ ಹಳ್ಳದ ಸುರೇಶ ಗುರೂಜಿ ಅವರ ನಿವಾಸದಲ್ಲಿ ನಡೆದ ೧೫೮ ನೇ ಮನೆ-ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ಪಿ.ಈ.ಅಭಿಪ್ರಾಯ ವ್ಯಕ್ತಪಡಿಸಿದರು.
ಚುಟುಕು ಎಂದರೆ ಇದೊಂದು ಅಡುಗಬ್ಬ. ಬಹಳ ವಿಸ್ತಾರವಾಗಿ ಹೇಳುವುದನ್ನು ಸಂಕ್ಷಿಪ್ತವಾಗಿ ಹೇಳುಬಹುದು. ಕುವೆಂಪು ಅವರು ಇದು ಪ್ರಜ್ವಲ ಹೊಳಪು, ಇದರಲ್ಲಿ ಹೊಳೆವ ಮಿಂಚು ಅಡಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚುಟುಕಗಳಿಗೆ ವಸ್ತುಗಳ ಮಿತಿಯಿಲ್ಲ. ಡಾ.ಸಿ.ಪಿ.ಕೆ.ಅವರು ಸಂಕಟ, ಬಡತನ, ಸಿಟ್ಟು ಇಂತಹ ವಸ್ತುಗಳನ್ನು ಆಯ್ದುಕೊಂಡು ರಚಿಸಿರುವ ಚುಟುಕಗಳಲ್ಲಿ ಎಲ್ಲ ಭಾವನೆಗಳೂ ಕ್ಷಣ ಮಾತ್ರದಲ್ಲಿ ಮಾಯವಾಗುತ್ತವೆ. ಸೂಕ್ಷ್ಮ ಬೀಜದಲ್ಲಿ ವಟ ವೃಕ್ಷವಾಗುವಂತೆ ಚುಟುಕಗಳು ವಿಜೃಂಭಿಸುತ್ತವೆ ಎಂದು ಹೇಳಿದರು.
೯೨ನೇ ವಸಂತಕ್ಕೆ ಕಾಲಿಡುತ್ತಿರುವ ದೇ.ಜ.ಗೌ.ಅವರ ಕೇಳುಮಗಳೆ ಎನ್ನುವ ಕೃತಿಯನ್ನು ಅವರ ಶಿಷ್ಯರು ಹೊರತಂದಿದ್ದಾರೆ. ಚರಿತ್ರೆ, ನಾಟಕ, ಕವಿತೆ, ಕತೆ, ಕಾದಂಬರಿಗಳ ಪ್ರಾಕಾರದಲ್ಲಿ ಕೈ ಆಡಿಸಿರುವ ಅವರು ಚುಟುಕು ಕ್ಷೇತ್ರದಲ್ಲೂ ಸಹ ಕೈಯಾಡಿಸಿದ್ದಾರೆ. ಅವರ ಮೂರು ದಶಕಗಳ ಪರಿಶ್ರಮವೇ ಚುಟಕಗಳಾಗಿ ಹೊರಹೊಮ್ಮಿವೆ. ಮಗಳಿಗೆ ಬುದ್ಧಿ ಮಾತುಗಳನ್ನು ಹೇಳುವ ನೆಪದಲ್ಲಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ದುಃಖ-ದುಮ್ಮಾನಗಳನ್ನು ತಮ್ಮ ಎದೆಯೊಳಗೆ ಅದುಮಿಟ್ಟುಕೊಂಡು ಸಮಾಜಕ್ಕೆ ಸಾಂತ್ವನವನ್ನು ಹೇಳುತ್ತಾರೆ. ಬಿಲ್ಲಿಗೆ ಬಾಣವಿರುವಂತೆ ಪುರುಷನಿಗೆ ಸ್ತ್ರೀ ಸಾಂಗತ್ಯವಿರುತ್ತದೆ. ಅವರ ಸ್ವಾನುಭವಗಳನ್ನು ಅವರ ಚುಟುಕಗಳಲ್ಲಿ ಕಾಣಬಹುದು. ಬಡತನ, ಬಡವರ ಮೇಲಿನ ಶೋಷಣೆಯನ್ನು ಸಹ ಮನದಟ್ಟು ಮಾಡಿ ಕೊಡುವಲ್ಲಿ ಇವರ ಚುಟುಕಗಳು ಯಶಸ್ವಿಯಾಗುತ್ತವೆ. ಅನುಭವಕ್ಕೆ ತಕ್ಕಂತೆ ಬಲಾಯಿಸಿಕೊಳ್ಳುವ ಶಕ್ತಿ, ಸೋಪಜ್ಞತೆಯನ್ನು ಕಾಣಬಹುದು ಎಂದು ನುಡಿದರು.
ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ ಡಾ.ಸ.ನಂ.ಬಸವೇಗೌಡ, ಡಿ.ಜೆ.ಮಂಜುನಾಥ, ಡಾ.ಜಯಚಂದ್ರಗುಪತ್ತ, ಶೀಟಿ ಎಂ.ಸಿ.ಎಫ್., ವಿ.ನಾಗರಾಜು, ಜಯದೇವಪ್ಪ, ಸಂಜೀವಗೌರ್ ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆಯು ತನ್ನ ೧೩ನೇ ವಾರ್ಷಿಕೋತ್ಸವವನ್ನು ಜನವರಿ ೧೦ರಂದು ಆಚರಿಸಿಕೊಳ್ಳಲು ನಿರ್ಧರಿಸಿ ವಾರ್ಷಿಕೋತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಮಿತಿಯಲ್ಲಿ ಚಂದ್ರಕಾಂತ ಪಡೇಸೂರ್, ಎನ್.ಎಲ್.ಚನ್ನೇಗೌಡ, ಶೀಟಿ, ಎಚ್.ಆರ್.ಚಂದ್ರಶೇಖರ್, ಜಯದೇವಪ್ಪ, ಸುರೇಶ್ ಗುರೂಜಿ, ಶ್ರೀಮತಿ ಲೀಲಾವತಿ, ಕೆ.ಟಿ.ಜಯಶ್ರೀ, ಶೈಲಜಾಹಾಸನ್ ಮತ್ತು ಡಾ.ಜಯಚಂದ್ರಗುಪ್ತ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಶ್ರೀ ಶೀಟಿ ಕಾರ್ಯಕ್ಕರಮ ನಿರೂಪಿಸಿದರು. ಸುರೇಶ್ ಗುರೂಜಿ ಸ್ವಾಗತಿಸಿದರು. ವಿ.ನಾಗರಾಜು ವಂದಿಸಿದರು.
ಗೃಹರಕ್ಷಕರ ವೃತ್ತಿಪರ ಹಾಗ ಕ್ರೀಡಾಕೂಟ:
ಹಾಸನ-ಡಿ-೯. ಮೈಸೂರಿನಲ್ಲಿ ನಡೆದ ಮೈಸೂರು ವಿಭಾಗದ ಗೃಹರಕ್ಷಕರ ವೃತ್ತಿಪರ ಹಾಗ ಕ್ರೀಡಾಕೂಟದಲ್ಲಿ ಹಾಸನ ಜಿಲ್ಲೆಯಿಂದ ಭಾಗವಹಿಸಿದ ಗೃಹರಕ್ಷಕರು ಕ್ರೀಡೆಗಳಲ್ಲಿ ಜಯಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಹಾಸನ ಜಿಲ್ಲಾ ಕಮಾಂಡೆಂಟ್ ಕೆ.ಎಂ.ಸುರೇಶ್ಕಜ ವಿಜಯಾಶಾಲಿಯಾದ ಗೃಹರಕ್ಷಕರನ್ನು ಅಭಿನಂದಿಸಿರುತ್ತಾರೆ.
ಕ್ರ.ಸಂ. ಕ್ರೀಡೆಯ ಹೆಸರು, ಫಲಿತಾಂಶ
ಮಹಿಳಾ ವಿಭಾಗ, ೧೦೦ ಮೀಟರ್ ಓಟ, ಪ್ರಥಮ ಹಾಗೂ ದ್ವಿತೀಯ, ೪೦ಮೀಟರ್ ಓಟ-ಪ್ರಥಮ, ೪ ೧೦೦ ರಿಲೇ ಪ್ರಥಮ.
ಪುರುಷರ ವಿಭಾಗ: ೧೦೦ಮೀಟರ್ ಓಟ ಪ್ರಥಮ, ೮೦೦ಮೀಟರ್ ಓಟ, ದ್ವಿತೀಯ, ೪ ೧೦೦ಮೀ. ಓಟ ಪ್ರಥಮ., ಲಾಂಗ್ ಜಂಪ್ ಪ್ರಥಮ, ವಾಲಿಬಾಲ್ ಪ್ರಥಮ, ಕಬ್ಬಡಿ ಪ್ರಥಮ,
ವೃತ್ತಿಪರ ಕ್ರೀಡೆಗಳು, ರೆಸ್ಕೂ ಪ್ರಥಮ, ಸ್ಕ್ವಾಡ್ ಡ್ರೀಲ್, ಪ್ರಥಮ.