ಭಟ್ಕಳ : ಸಿವಿಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಎರಡು ಪ್ರಾಜೆಕ್ಟ್ ಗಳು 46 ನೇ ಸಾಲಿನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಕೆಎಸ್ಸಿಎಸ್ಟಿ) ಗಾಗಿ ಆಯ್ಕೆಗೊಂಡಿವೆ.
ಸಂಜಯ್ ಬಿ ನಾಯ್ಕ, ಸಚಿನ್ ಕೆ ಗೊಂಡ, ಸಂದೇಶ ಎಸ್ ನಾಯ್ಕ, ಶಿಖಾ ಎ ಗೋವೆಕರ, ಮಹಮದ್ ಫಹೀಮ್, ಸಜಾದ್ ಕೆ, ಮಹಮದ್ ಇಸ್ಲಾಂ ಮತ್ತು ಅಹಮದ್ ನಿಜಾಮುದ್ದೀನ್ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.
ಸಿವಿಲ್ ವಿಭಾಗದ
ಉಪನ್ಯಾಸಕರಾದ ಪ್ರೋ. ವಿದ್ಯಾಧರ. ಎನ್. ಹಾಗೂ ಪ್ರೋ. ಮನೋಹರ. ಬಿ. ರವರ ಮಾರ್ಗದರ್ಶನದಡಿಯಲ್ಲಿ
ಮಾಡಿದ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗೆ ಆಡಳಿತ ಮಂಡಳಿ , ಪ್ರಾಂಶುಪಾಲರು, ವಿಭಾಗದ
ಮುಖ್ಯಸ್ಥರು ಹಾಗೂ ಉಪನ್ಯಾಸಕ ವೃಂದ ಸಂಘ ಸಂತಸ ಪಡಿಸಿ ವಿದ್ಯಾರ್ಥಿಗಳನ್ನ ಅಭಿನಂದಿಸಿದ್ದಾರೆ.