ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಬೆಳನಿಯಲ್ಲಿ ಅಗ್ನಿಗೆ ಆಹುತಿಯಾದ ಮನೆ - ಬೀದಿಗೆ ಬಂದ ಕುಟುಂಬ

ಭಟ್ಕಳ: ಬೆಳನಿಯಲ್ಲಿ ಅಗ್ನಿಗೆ ಆಹುತಿಯಾದ ಮನೆ - ಬೀದಿಗೆ ಬಂದ ಕುಟುಂಬ

Fri, 30 Oct 2009 14:33:00  Office Staff   S.O. News Service
ಭಟ್ಕಳ, ಅಕ್ಟೋಬರ್ 30:  ಇಂದು ರಾತ್ರಿ ಸುಮಾರು ಹತ್ತು ಘಂಟೆಗೆ ಭಟ್ಕಳ ತಾಲ್ಲೂಕಿನ ಬೆಳನಿ ಗ್ರಾಮದಲ್ಲಿ ದುರ್ಗಮ್ಮ ಸದಾನಂದ ನಾಯಕ್ ರವರ ಮನೆ ಅಗ್ನಿಗಾಹುತಿಯಾಗಿದೆ.  ದುರ್ಗಮ್ಮ ಹಾಗೂ ಮಕ್ಕಳಾದ ಸಿದ್ಧಾರ್ಥ ಮತ್ತು ದಿಗಂಬರ ಅಪಾಯದಿಂದ ಪಾರಾಗಿದ್ದರೂ ಮನೆಯನ್ನು ಕಳೆದುಕೊಂಡಿದ್ದಾರೆ.

ಅಗ್ನಿ ಮನೆಯಲ್ಲಿದ್ದ ಹತ್ತು ಸಾವಿರ ರೂ. ನಗದು, ಚಿನ್ನಾಭರಣ, ಬಟ್ಟೆಬರೆ, ಆಹಾರ ಸಾಮಾಗ್ರಿಗಳ ಸಹಿತ ಸಕಲ ವಸ್ತುಗಳನ್ನು ಆಹುತಿ ತೆಗೆದುಕೊಂಡಿದೆ.

ಬೆಂಕಿ ಕಂಡ ಕೂಡಲೇ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದರಾದರೂ ಮನೆಯ ಆಕ್ಕಪಕ್ಕ ನೀರಿನ ಬಾವಿಯ ಅಭಾವದಿಂದಾಗಿ ಬೆಂಕಿಯನ್ನು ನಂದಿಸಲು ವಿಫಲರಾದರು. ಆದರೆ ಈ ಬೆಂಕಿ ಅಕ್ಕಪಕ್ಕದ ಇನ್ನಷ್ಟು ಮನೆಗಳಿಗೆ ಹಬ್ಬದಂತೆ ತಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ. 

ಪ್ರಸ್ತುತ ದುರ್ಗಮ್ಮನವರ ಪತಿ ಸದಾನಂದ ನಾಯಕ್ ಭಟ್ಕಳದಿಂದ ಹೊರಗೆ ಉದ್ಯೋಗದಲ್ಲಿದ್ದು ಅಗ್ನಿದುರಂತದ ವೇಳೆ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಮಕ್ಕಳಾದ ಸಿಧ್ದಾರ್ಥ ಮತ್ತು ದಿಗಂಬರ ಏಂಟನೆಯ ಮತ್ತು ಎಂಟನೆಯ ತರಗತಿಯಲ್ಲಿ ಓದುತ್ತಿದ್ದು ಅವರ ಪಠ್ಯಸಾಮಾಗ್ರಿಗಳೂ ಅಗ್ನಿಗಾಹುತಿಯಾಗಿವೆ.

Share: