ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ನೆರೆಸಂತ್ರಸ್ತರಿಗೆ ಒಂದೂ ಮನೆ ಕಟ್ಟಿಕೊಡದ ಸರ್ಕರ - ನಾನೂರು ಮನೆ ಕಟ್ಟಿಸಿಕೊಡಲು ಜಮಾತೆ ಇಸ್ಲಾಮಿ ಹಿಂದ್ ನಿರ್ಧಾರ

ಭಟ್ಕಳ: ನೆರೆಸಂತ್ರಸ್ತರಿಗೆ ಒಂದೂ ಮನೆ ಕಟ್ಟಿಕೊಡದ ಸರ್ಕರ - ನಾನೂರು ಮನೆ ಕಟ್ಟಿಸಿಕೊಡಲು ಜಮಾತೆ ಇಸ್ಲಾಮಿ ಹಿಂದ್ ನಿರ್ಧಾರ

Sat, 09 Jan 2010 19:40:00  Office Staff   S.O. News Service
ಭಟ್ಕಳ, ಜನವರಿ 9: ಕಳೆದ ಮೂರು ನಾಲ್ಕು ತಿಂಗಳುಗಳ ಹಿಂದೆ ಅತಿವೃಷ್ಟಿಯಿಂದಾಗಿ ತಮ್ಮ ಮನೆ ಮಠಗಳನ್ನು ಕಳೆದು ಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ ಸರಕಾರದಿಂದ ಒಂದು ಗುಡಿಸಲು ಸಹ ಕಟ್ಟಿಕೊಡುವುದು ಆಗಲಿಲ್ಲ ಕೇವಲ ಸುಳ್ಳು ಆಶ್ವಾಸನೆಗಳನ್ನು  ನೀಡುವುದರಲ್ಲಿಯೆ ಸರಕಾರವು ಕಾಲಹರಣ ಮಾಡುತ್ತಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಗುಲ್ಬರ್ಗಾ ವಿಭಾಗದ ಸಂಚಾಲಕ ಮುಹಮ್ಮದ್ ಯೂಸೂಫ ಕನ್ನಿ ಆರೋಪಿಸಿದ್ದಾರೆ. ಅವರು ಶನಿವಾರದಂದು ಸಂಜೆ  ೭ ಗಂಟೆಗೆ ನಗರದ ದಾವತ್ ಸೆಂಟರ್ ನಲ್ಲಿ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 
 
ಅತಿವೃಷ್ಟಿಗೀಡಾದ ಸುಮಾರು ೧೪೦ ಹಳ್ಳಿಗಳ ಸಮೀಕ್ಷೆಯನ್ನು ತಾವು ಮಾಡಿದ್ದು ಇದರಲ್ಲಿ ಒಂದು ಮನೆಯನ್ನು ಸಹ ಸರಕಾರ ಇದುವರೆಗೂ ಯಾರಿಗೂ ಕಟ್ಟಿಕೊಡಲಿಲ್ಲ. ಕೇವಲ ಸಾವಿರ ಐದು ಸಾವಿರ ರೂಗಳನ್ನು ನೀಡಿದ್ದು ಬಿಟ್ಟರೆ ನಿರಾಶ್ರಿತರಿಗೆ ಯಾವುದೆ ಪುನರ್ ವಸತಿ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಿದ ಅವರು ಜಮಾತೆ ಇಸ್ಲಾಮಿ ಹಿಂದ್ ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯನ್ನಿಟ್ಟಿದ್ದು ೪೦೦ ಹೊಸ ಮನೆಗಳನ್ನು ನಿರ್ಮಿಸುವ ಯೋಜನೆಯಿದ್ದು ಅದರಲ್ಲಿ ಈಗಾಗಲೆ ೭೫ ಮನೆಗಳಿಗೆ ಬುನಾದಿಯನ್ನು ಹಾಕಲಾಗಿದೆ ಎಂದರು. ಉತ್ತರಕರ್ನಾಟಕದ ಎಲ್ಲಾ ೧೧ ಜಿಲ್ಲೆಗಳು ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಸಹ ಈ ನೆರೆಯಲ್ಲಿಯೆ ಕೊಚ್ಚಿಕೊಂಡುಹೋಗಿರುವ ಶಂಕೆಯಿದ್ದು ಅವರು ಒಮ್ಮೆಯೂ ಸಹ ನೆರೆಪೀಡಿತ ಪ್ರದೇಶಗಳಿಗೆ ಇಣುಕಿ ಸಹ ನೋಡಲಿಲ್ಲ.
 
ಆರಂಭದಲ್ಲಿ ಕೇವಲ ಮೊಸಳೆ ಕಣ್ಣೀರು ಸುರಿಸಿದ ಸರಕಾರ ಈಗ ಎಲ್ಲವೂ ಮುಗಿದ ಮೇಲೆ ಆಕಡೆ ಕಣ್ಣೆತ್ತಿಯೊ ನೋಡುತ್ತಿಲ್ಲ ಎಂದರು. ಜಮಾ‌ಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಅಂಗ ಸಂಸ್ಥೆಯಾದ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ವತಿಯಿಂದ ಈಗಾಗಲೆ ಸಾವಿರಾರು ಕುಟುಂಬಳಿಗೆ ಆಶ್ರಯವನ್ನು ನೀಡಿದ್ದು ಮೂರು ಹಂತಗಳಲ್ಲಿ ಪರಿಹಾರ ಕಾರ್ಯವನ್ನು ಮಾಡಿದೆ. ಮೊದಲ ಹಂತದಲ್ಲಿ ೨೦ ಸಾವಿರ ಕುಟುಂಬಗಳಿಗೆ ಫುಡ್ ಕಿಟ್, ಬ್ಲಾಂಕೆಟ್, ಬೆಡೆಷೀಟ್, ಮತ್ತಿತರ ಜೀವನಾವಶ್ಯಕ ಸಾಮಾಗ್ರಿಗಳನ್ನು ವಿತರಿಸಿದೆ ಬಿಜಾಪುರ, ಗದಗ, ರಾಯಚೂರು, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಗಳನ್ನು ಹಮ್ಮಿಕೊಂಡಿದ್ದು ಸುಮಾರು೮೦೦೦ ಸಾವಿರಕ್ಕೂ ಹೆಚ್ಚು ಜನರು ಇದರಿಂದ ಪ್ರಯೋಜನವನ್ನು ಪಡೆದಿದ್ದಾರೆ ನೂರಾರು ಹಳ್ಳಿಗಳಲ್ಲಿ ನೆರಯಿಂದಾಗಿ ಕುರಿ-ಕೋಲಿ ಜಾವನುವಾರುಗಳು ಕೊಚ್ಚಿ ಹೊಗಿದ್ದು ಅಂತಹ ಸುಮಾರು ೨೦೦ಕ್ಕೂ ಹೆಚ್ಚು ಕುಟುಂಗಳಿಗೆ ಸಾಕಣೆ ಮಾಡಲು ಕುರಿಗಳನ್ನು ನೀಡಲಾಗಿದೆ. ೧೧ ಜಿಲ್ಲೆಗಳಲ್ಲಿ ಹೊಲಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು ಈಗಾಗಲೆ ೧೧ ಸ್ಥಳಗಳಲ್ಲಿ ಹೊಲಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಇದರಿಂದಾಗಿ ೬೦೦ ಕುಟುಂಬಗಳಿಗೆ ಸಹಾಯ ಒದಗಲಿದೆ ಎಂದ ಅವರು ಇಲ್ಲಿಯವರೆಗೆ ಒಟ್ಟು ೧೫ಸಾವಿರ ಕುಟುಂಬಗಳಿಗೆ ಬಟ್ಟಬರೆಗಳನ್ನು ವಿತರಿಸಲಾಗಿದೆ ಎಂದರು.ಸುಮಾರು ೧೫೦೦ ಮೆನಗಳ ದುರಸ್ತಿ ಕಾರ್ಯವನ್ನು ಮಾಡುವ ಯೋಜನೆಯನ್ನು ಹೊಂದಿದ್ದು ಇದುವರೆಗೆ ೩೦೦ ಮನೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.  ಜಮಾ‌ಅತೆ ಇಸ್ಲಾಮಿ ಹಿಂದ್ ಸಂಘಟನೆಯು ರಾಜ್ಯದ್ಯಂತ ಜಾತಿ ಮತ ಬೇಧವೆನ್ನದೆ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣುತ್ತಿದ್ದು ಪರಿಹಾರ ಕಾರ್ಯಗಳಲ್ಲಿಯು ಯಾವುದೆ ತಾರತಮ್ಯವನ್ನು ತೋರದೆ ಶೇ೭೫ ರಷ್ಟು ಮುಸ್ಲಿಮರಲ್ಲದ ಕುಟುಂಬಗಳಿಗೆ ಸಹಾಯವನ್ನು ನೀಡಿದೆ ಎಂದರು.
 
ಅಲ್ಲದೆ ಜಮಾ‌ಅತೆ ಇಸ್ಲಮಿ ಹಿಂದ್ ರಾಜ್ಯದಲ್ಲಿ ಸೌಹಾರ್ಧತೆ ಮತ್ತು ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಂಡಿದ್ದು ಇಲ್ಲಿನ ಪ್ರಮುಖ ಧರ್ಮಗಳ ಧಾರ್ಮಿಕ ಮುಖಂಡರ ಜತೆ ಮಾತುಕತೆಯನ್ನು ನಡೆಸಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಜಮಾ‌ಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಸಾದಾ ಮೀರಾ ಮತ್ತಿತರರು ಉಪಸ್ಥಿತರಿದ್ದರು.


Share: