ಸಕಲೇಶಪುರ, ನವೆಂಬರ್ 26:- ಕನ್ನಡ ರಾಜ್ಯೋತ್ಸವಕ್ಕೆ ಪುರಸಭೆಯಲ್ಲಿ ಅವಕಾಶ ನೀಡದ ಉಪಾವಿಭಾಗಧಿಕಾರಿಯ ವರ್ತನೆಯನ್ನು ಖಂಡಿಸಿ ಪಟ್ಟಣದ ವಿವಿದ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನ 27 ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಜಯ ಕರ್ನಾಟಕ ಸಂಘದ ಅಧ್ಯಕ್ಷ ಸುಪ್ರದೀಪ್ತ ಯಜಮಾನ್ ಹೇಳಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಟ್ಟಣದಲ್ಲಿ ಅದಿಕಾರಿಗಳ ದರ್ಬಾರ್ ಆರಂಭವಾಗಿದೆ, ಕನ್ನಡ ನಾಡು ನುಡಿಗೆ ಸಂಭದಿಸಿದ ಕಾರ್ಯಕ್ರಮವನ್ನು ನೆಡಸಲು ಪುರಭವನದಲ್ಲಿ ಅವಕಾಶ ನೀಡದಿರುವ ಉಪವಿಭಾಗಧಿಕಾರಿಗಳ ವರ್ತನೆ ಅತೀರೇಕದ್ದಾಗಿದೆ ಎಂದರು. ಈ ಹಿಂದೆಯೂ ಸರ್ಕಾರದ ಅಂಗ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರೀಷತ್ಗೂ ಕಾರ್ಯಕ್ರಮ ನೆಡಸಲು ಅವಕಾಶ ಕಲ್ಪಿಸಿಲ್ಲ, ಪಟ್ಟಣದಲ್ಲಿ ಪುರಭವನ ಹೊರತು ಪಡಿಸಿ ಕಾರ್ಯಕ್ರಮ ನೆಡಸಲು ಯಾವುದೇ ಸಭಾಂಗಣವಿಲ್ಲ ಇದರ ಅರಿವಿದ್ದರೂ ಜನರ ಇಚ್ಚೇಗೆ ವಿರುದ್ದವಾಗಿ ವರ್ತಿಸುತಿರುವ ಈ ಅಧಿಕಾರಿಯನ್ನು ತಕ್ಷಣವೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಸಾಂಸ್ಕ್ರತಿಕ ಘಟಕದ ಅಧ್ಯಕ್ಷ ಸಾ.ಸು ವಿಶ್ವನಾಥ ಮಾತನಾಡಿ ಪಟ್ಟಣದಲ್ಲಿ ಸಾಂಸ್ಕೃತಿಕ ಚಟುವಟಿಕೆ ನೆಡಸುವ ಉದ್ದೇಶದಿಂದಲೇ ದಾನಿಗಳು ಪುರಭವನ ನಿರ್ಮಿಸಲು ಸ್ಥಳ ನೀಡಿದ್ದಾರೆ, ಆದರೆ ಅಧಿಕಾರಿಗಳು ಯಾವುದೇ ಸಾಂಸ್ಕ್ರತಿಕ ಕಾರ್ಯಕ್ರಮ ನೆಡಸಲು ಅವಕಾಶ ನಿಡದಿರುವುದು ದಾನಿಗಳಿಗೆ ಮಾಡಿದ ಅವಮಾನವಾಗಿದೆ ಎಂದರು. ಜನರ ಉಪಯೋಗಾಗಕ್ಕಾಗಿ ದಾನ ಮಾಡಿರುವ ಈ ಕಟ್ಟಡವನ್ನು ಕನ್ನಡ ಸಂಸ್ಕ್ರತಿ ಇಲಾಖೆ ವಶಕ್ಕೆ ಪಡೆಯುವ ಮೂಲಕ ಬಹು ಜನರ ಬಯಕೆಯನ್ನು ಈಡೇರಿಸ ಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳದ ಸುರೇಶ್ ಆಳ್ವ, ಜಗದೀಶ್, ಹೇಮಂತ್, ಪ್ರವೀಣ್ ಮುಂತಾದವರಿದ್ದರು.