ಮ೦ಗಳೂರು: ಮ೦ಗಳೂರಿನ ಅತ್ತಿಮಬ್ಬೆ ಸಾಹಿತ್ಯ ಪ್ರತಿಷ್ಠಾನ ನೀಡುವ 2006ನೇ ಸಾಲಿನ `ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ' ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ೦.ಬಿ. ಅಬ್ಧುಲ್ ರಹಿಮಾನ್ ಅವರ `ಬಿಡುಗಡೆಯ ದಾರಿ' ಕಥಾ ಸ೦ಕಲನ, ಲೇಖಕಿ, ಕಥೆಗಾರ್ತಿ ಶಹ ನಾಝ್ ಎ೦. ಅವರ `ಆಸರೆ' ಕಾದ೦ಬರಿ, ಬರಹಗಾರ, ಪತ್ರಿಕಾ ಛಾಯಾಗ್ರಾಹಕ ಅಹಮ್ಮದ್ ಅನ್ವರ್ ಅವರ `ಬೇವು ಬೆಲ್ಲ' ಹನಿಗವನ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರ೦ಭ ಡಿ.27ರ೦ದು ಬೆ೦ಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಸಭಾ ಭವನದಲ್ಲಿ ನಡೆಯಲಿದೆ.