ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ನಗರ - ನೀರುಳಿಸುವಿಕೆಯ ಪಾಠ ಅನಿವಾರ್ಯ

ಬಂಟ್ವಾಳ: ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ನಗರ - ನೀರುಳಿಸುವಿಕೆಯ ಪಾಠ ಅನಿವಾರ್ಯ

Wed, 10 Mar 2010 18:16:00  Office Staff   S.O. News Service
ಬಂಟ್ವಾಳ, ಮಾರ್ಚ್ ೧೦ :  ತಾಲೂಕಿಲ್ಲೆಡೆ ನೀರಿನ ಅಭಾವ ಈಗಲೇ ಕಾಣಿಸಿಕೊಂಡಿದ್ದು, ತಮ್ಮ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆ ಮಾಡಿಕೊಡಲು ತಾಲೂಕಿನ ಗ್ರಾಮ ಪಂಚಾಯತ್‌ಗಳು ಶ್ರಮಿಸುತ್ತಿವೆ.
 
ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ನೀರಿನ ಅಭಾವ ಎದುರಾಗಿರುವುದು ತಾಲೂಕಿನ ಶಾಲಾ ಕಾಲೇಜುಗಳಲ್ಲಿಯೂ ನೀರುಳಿತಾಯದ ಪಾಠವನ್ನು ಅನಿವಾರ್ಯವಾಗಿ ಭೋಧಿಸುವಂತೆ ಮಾಡಿದೆ. ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸುಮಾರು ಹತ್ತರಿಂದ ಹದಿನದಕ್ಕೂ ಮೇಲ್ಪಟ್ಟು ಪಂಚಾಯತ್ ಗೆ ಸೇರಿದ ಬೋರ್ ವೆಲ್ ಗಳು ಇದ್ದರೂ ಬಹುತೇಕ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಬಾವಿಗಳಲ್ಲಿನ ನೀರು ಆಳಕ್ಕಿಳಿದಿರುವುದರಿಂದ,ಪಂಪ್ ಮೂಲಕ ಟಾಂಕಿಗಳಿಗೆ ಭರ್ತಿ ಮಾಡುವ ಆಲೋಚನೆಯೂ ವ್ಯರ್ಥವಾದಂತಿದೆ.
 
ನಾಗರೀಕರಲ್ಲಿ ವರುಷದಿಂದ ವರುಷಕ್ಕೆ ನೀರಿನ ಬಳಕೆಯೂ ಏರುತ್ತಿದೆಯಾದರೂ, ಲಭ್ಯವಿರುವ ನೀರಿನ ಮೂಲಗಳು ಮೊದಲಿಗಿಂತ ಕಡಿಮೆ ಇದೆ. ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕ ನಳ್ಳಿನೀರಿಗೆ ಮೊರೆ ಹೋಗುತ್ತಿದ್ದ ಬಹುತೇಕ ನಾಗರೀಕರು, ಪಂಚಾಯತ್ ನಿಯಮದಂತೆ ಮನೆಮನೆಗೆ ನಳ್ಳಿ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಆದರೆ ಇದೀಗ ಬಹುತೇಕ ಪಂಚಾಯತ್ ವ್ಯಾಪ್ತಿಯ ಬೋರ್‍ವೆಲ್ ಗಳಲ್ಲಿ ನೀರಿನ ಅಭಾವ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜನತೆ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಮಾಚ್  ನಲ್ಲೇ ಬಂದಿರುವ ”ಬರ” ದ ಬಗ್ಗೆ ಆತಂಕ ಪಟ್ಟಿರುವ ಬಂಟ್ವಾಳದ ಜನತೆ, ಮುಂದಿನ ಎಪ್ರಿಲ್,ಮೇ ತಿಂಗಳ ಕಡುಬೇಸಿಗೆ ದಿನಗಳ ಬಗ್ಗೆ ಭೀತಿಯಿಂದ ಇದ್ದಾರೆ.
 
ಶೀಘ್ರದಲ್ಲೇ ಗ್ರಾಮಪಂಚಾಯತ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಗ್ರಾ.ಪಂ.ಅಧಿಕಾರದ ಗದ್ದುಗೆಯಲ್ಲಿರುವ ಪಕ್ಷಗಳಿಗೆ ಸಮರ್ಪಕ ನೀರಿನ ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಇನ್ನೂ ಕೆಲವು ಗ್ರಾಪಂ ಅಧ್ಯಕ್ಷರು, ಒಮ್ಮೆ ಚುನಾವಣೆ ಡಿಕ್ಲೇರ್ ಆದರೆ ಸಾಕು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕಗ್ಗಂಟಾಗಲಿರುವ ಈ ಸಮಸ್ಯೆಯ ಬಗ್ಗೆ ತಾಲೂಕು ಆಡಳಿತ,ಹಾಗೂ ನಮ್ಮ ಜನಪ್ರತಿನಿಧಿಗಳು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
..................................................
ಬಂಟ್ವಾಳ ; ಯುವತಿಯರ ಸರಣಿ ಹಂತಕ ಮೋಹನ್ ಕುಮಾರ್ ನ ತನಿಖೆಯನ್ನು ತೀವ್ರಗೊಳಿಸಿರುವ ಸಿ‌ಒಡಿ ಅಧಿಕಾರಿಗಳ ತಂಡ ಕಳೆದ ಕೆಲದಿನಗಳಿಂದ ಬಂಟ್ವಾಳದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಅಗತ್ಯದ ಮಾಹಿತಿಗಳನ್ನು ಕಲೆಹಾಕುತ್ತಿರುವ ತಂಡ, ಆರೋಪಿ ಮೋಹನ್ ಕುಮಾರ್ ನನ್ನು ಹೆಚ್ಚಿನ ತನಿಖೆಗಾಗಿ ಬುಧವಾರ ಮಡಿಕೇರಿಗೆ ಕರೆದೊಯ್ದಿದ್ದಾರೆ.


Share: