ಭಟ್ಕಳ:೧೮,ಜುಗಾರಿ ಅಡ್ಡಯಲ್ಲಿ ಇಸ್ಪಿಟ್ ಎಲೆಗಳ ಮೇಲೆ ಜೂಜು ಆಡುತ್ತಿದ್ದ ಐದುಮಂದಿಯನ್ನು ಮಾವಿನ ಕುರ್ವೆಯ ಕರಿಕಾಲ್ ಎಂಬಲ್ಲಿ ಭಟ್ಕಳ ಗ್ರಾಮೀಣ ಪೋಲಿಸರು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಕರಿಕಾಲ್ ನಿವಾಸಿಗಳಾದ ಡುಮ್ಮಂಗ್ ಡಿ,ಸೋಜ, ಕುಪ್ಪಯ್ಯ ನಾಯ್ಕ, ತಿಮ್ಮಪ್ಪ ದುರ್ಗಪ್ಪ ನಾಯ್ಕ, ಸತಿಶ ಮಾದೇವ ನಾಯ್ಕ, ಹಾಗೂ ನಾಗೇಶ್ ಕುಪ್ಪಯ್ಯ ನಾಯ್ಕ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೆರೆಗೆ ಜುಗಾರಿ ಅಡ್ಡೆಯ ಮೇಲೆ ದಾಳಿ ಮಾಡಿದ ಗ್ರಾಮೀಣ ಠಾಣೆಯ ಪಿಎಸ್ಐ ತಿಮ್ಮಪ್ಪ ನಾಯ್ಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರಿಂದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.