ಮಂಗಳೂರು ಮಾರ್ಚ್ ೧೧ (ಕರ್ನಾಟಕ ವಾರ್ತೆ):ಉಳ್ಳಾಲದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಣಿ ಅಬ್ಬಕ್ಕ ಉತ್ಸವಕ್ಕೆ ರಾಜ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ೨೫ ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಕೃಷ್ಣ ಪಾಲೇಮರ್ ,ಉಳ್ಳಾಲ ಶಾಸಕ ಶ್ರೀ ಯು.ಟಿ.ಖಾದರ್,ಮಾಜಿ ಶಾಸಕ ಜಯರಾಮ್ ಶೆಟ್ಟಿ, ದ.ಕ. ಜಿಲ್ಲಾ ಬಿ.ಜೆ.ಪಿ ರಾಜ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ರಹೀಂ ಉಚ್ಚಿಲ,ದಿನಕರ್ ಉಳ್ಳಾಲ ಅವರು ಮುಖ್ಯಮಂತ್ರಿಗಳನ್ನು ಈ ಸಂಬಂಧ ಬೇಟಿ ಮಾಡಿದ್ದರು.