ಮಂಜೇಶ್ವರ ಫೆಬ್ರವರಿ 25 ಗುರುವಾರ: ತೆಂಗಿನ ಮರ ಕಡಿಯುತ್ತಿದ್ದ ವೇಳೆ ಮರ ಮೇಲೆ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಕಳೆದ ದಿನ ನಡೆದಿದೆ. ಮೃತನನ್ನು ಮೀಯಪದವು ಗೌರಿಮೂಲೆ ನಿವಾಸಿ ಗೋಪಾಲ್ ಮೂಲ್ಯ(65) ಎಂದು ಗುರುತಿಸಲಾಗಿದೆ. ಖಾಸಗಿ ವೆಕ್ತಿಯೋರ್ವರ ಹಿತ್ತಿಲಿನಲ್ಲಿ ತೆಂಗಿನ ಮರ ಕಡಿಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಷ್ಟರಲಲ್ಲಿ ಸಾವು ಸಂಭವಿಸಿತ್ತು.
ವರದಿ: ಆರಿಫ್, ಮಂಜೇಶ್ವರ