ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಲ್ವಡಿ -ಕವೂರ ಮತಗಟ್ಟೆಯಲ್ಲಿ  ಮತದಾನದ ಹಕ್ಕು ಚಲಾಯಿಸಿದ ಜೆ.ಡಿ.ಎಸ್. ಅಭ್ಯರ್ಥಿ ನಾಗೇಂದ್ರ ನಾಯ್ಕ

ಯಲ್ವಡಿ -ಕವೂರ ಮತಗಟ್ಟೆಯಲ್ಲಿ  ಮತದಾನದ ಹಕ್ಕು ಚಲಾಯಿಸಿದ ಜೆ.ಡಿ.ಎಸ್. ಅಭ್ಯರ್ಥಿ ನಾಗೇಂದ್ರ ನಾಯ್ಕ

Wed, 10 May 2023 16:11:49  Office Staff   SOnews

 

ಭಟ್ಕಳ: ಭಟ್ಕಳ-ಹೊನ್ನವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ತಮ್ಮ ಕುಟುಂಬ ಸಮೇತ ಗುರುವಾರ ಬೆಳಿಗ್ಗೆ 8 ಗಂಟೆಗೆ  ಭಟ್ಕಳ ತಾಲೂಕಿನ ಯಲ್ವಡಿ -ಕವೂರ ಮತಗಟ್ಟೆಯಲ್ಲಿ ತಮ್ಮ  ಮತದಾನದ ಹಕ್ಕನ್ನು ಚಲಾಯಿಸಿದರು.

ನಂತರ ಅವರು ಮಾತನಾಡಿದ ಅವರು, ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಭಟ್ಕಳದ ಜನತೆ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷರಾದ ವಕೀಲ ಮಂಜುನಾಥ ಗೊಂಡ ಉಪಸ್ಥಿತರಿದ್ದರು.


Share: