ಸಕಲೇಶಪುರ, ನವೆಂಬರ್ 29:-ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪುರಭವನ ಕಟ್ಟಡ ನೀಡಲು ನಿರಾಕರಣೆ ಎಂಬಿತ್ಯಾದಿ ಪತ್ರಿಕಾ ಹೇಳಿಕೆ ಬಂದಿರುವ ವಿಚಾರಕ್ಕೆ ಪುರಸಭೆ ಅಧ್ಯಕ್ಷ ಇಬ್ರಾಹಿಂ ಯಾದ್ಗಾರ್ ಸ್ಪಷ್ಠನೆ ನೀಡಿದ್ದಾರೆ.
ನವಂಬರ್ ೨೫ ರಂದು ಸಂಜೆ ೫.೦೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಯ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಗೆದ್ದಲು ಪಂಡಿತರು ನಾಟಕ ಹಮ್ಮಿಕೊಳ್ಳಲಾಗಿದ್ದು ಅನುಮತಿ ನೀಡಬೇಕೆಂದು ಪುರಸಭೆಯನ್ನು ಕೋರಿ ಅರ್ಜಿ ನೀಡಿರುತ್ತಾರೆ. ಈ ಅರ್ಜಿಯ ಸಂಭಂಧ ಪುರಸಭೆಯ ಸಭಾಂಗಣ ನೀಡಲು ಜಿಲ್ಲಾಧಿಕಾರಿಗಳ ಆದೇಶ ರೀತ್ಯಾ ಉಪ ವಿಭಾಗಾಧಿಕಾರಿಗಳ ಅನುಮತಿ ಅವಶ್ಯಕತೆ ಇರುವುದಾಗಿ ಸಂಘಟನೆಯ ಮುಖಂಡರಿಗೆ ತಿಳಿಸಲಾಗಿತ್ತು ಹಾಗೂ ಸಂಘಟನೆಯ ಮುಖಂಡರೊಂದಿಗೆ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಲು ಖುದ್ದು ನಾನೇ ಹೋಗಿರುತ್ತೇನೆ, ಅವರೊಂದಿಗೆ ಸ್ಪಂದಿಸಿರುತ್ತೇನೆ.
ಸಭಾಂಗಣದ ಹೊರಗೆ ಮತ್ತು ಒಳ ಪ್ರದೇಶದಲ್ಲಿ ಯಾವುದೇ ಸಭೆ-ಸಮಾರಂಭ ನಡೆಸುವುದನ್ನು ಜಿಲ್ಲಧಿಕಾರಿಗಳು ನಿಷೇದಿಸಿ ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಾನೂನು ಪಾಲನೆ ದೃಷ್ಠಿಯಿಂದ ನಿರಾಕರಿಸಲಾಗಿದೆಯೇ ವಿನ: ಬೇರಾವುದೇ ದುರುದ್ದೇಶ ಹೊಂದಿರಲಿಲ್ಲ.
ನನಗಾಗಲಿ ಕೌನ್ಸಿಲ್ಗಾಗಲಿ ಕನ್ನಡ ಭಾಷೆ, ನಾಡು ನುಡಿ-ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇದೆ. ಈ ಘಟನೆ ದುರದೃಷ್ಠಕರ, ಈ ಬಗ್ಗೆ ವಿಷಾಧವಿದೆ.
ಕನ್ನಡ ನಾಡು ನುಡಿ, ಸಂಸ್ಕೃತಿಗೆ ಸಂಭಂಧಿಸಿದ ಕಾರ್ಯ ಕ್ರಮಗಳಿಗೆ ಪುರಭವನ ಕೊಡುವ ಸಂಭಂಧ ಕೌನ್ಸಿಲ್ನಲ್ಲಿ ಚರ್ಚಿಸಲು ಕ್ರಮವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿದ್ದಾರೆ.