ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಪಿಲ್ಟರ್ ದೇಣಿಗೆ ನೀಡಿದ ಉದ್ಯಮಿ ಶ್ರೀಧರ ನಾಯ್ಕ

ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಪಿಲ್ಟರ್ ದೇಣಿಗೆ ನೀಡಿದ ಉದ್ಯಮಿ ಶ್ರೀಧರ ನಾಯ್ಕ

Sat, 10 Dec 2022 07:36:28  Office Staff   so news

ಭಟ್ಕಳ:ತಾಲ್ಲೂಕಿನ ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಮುರುಡೇಶ್ವರದ ಉದ್ಯಮಿ ಶ್ರೀಧರ ನಾಯ್ಕ ನೀರು ಸುದ್ದಿಕರಣ ಉಪಕರಣವನ್ನು ದಾನವಾಗಿ ನೀಡಿದ್ದಾರೆ. 
ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತಮಾಡಿದ ಉದ್ಯಮಿ ಶ್ರೀಧರ ನಾಯ್ಕ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗ ಬರುತ್ತಿರುವುದರಿಂದ ನೀರಿನಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು ಇದರಿಂದ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರದಿರಲು ಈ ಸಣ್ಣ ಸೇವೆಯನ್ನು ನೀಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಕಡೆ ದೊಡ್ಡ ದೊಡ್ಡ ರಾಜಕಾರಿಣಿಗಳು ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ ಎಂದ ಅವರು ಕಳೆದ 20 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾನು ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮಹತ್ವ ಪೂರ್ವ ಬದಲಾವಣೆಯನ್ನು  ಈಗಾಗಲೇ ತಂದಿದ್ದೇನೆ. ನನ್ನ ಕೈಲಾದ ಮಟ್ಟಿಗೆ ನನ್ನ ಕ್ಷೇತ್ರದಲ್ಲಿ ಸಹಾಯ ಸಹಕಾರವನ್ನು ನೀಡಿದ್ದೇನೆ. ಇಂದು ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ನನ್ನ ಸಣ್ಣದೊಂದು ಕಾಣಿಕೆಯನ್ನು ನೀಡಿದ್ದೇನೆ ಎಂದರು. 
2023 ರ ವಿಧಾನ ಸಭಾ ಚುನಾವಣೆಯಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲು ರಾಷ್ಟ್ರೀಯ ಪಕ್ಷದಿಂದ ಅರ್ಜಿಯನ್ನು ಸಲ್ಲಿಸಿದ್ದೇನೆ. ಇದಕ್ಕೆ ಕಾರಣ ಒಂದು ದೊಡ್ಡ ಮುಟ್ಟದಲ್ಲಿ ಹೊರದರೆ ನಮ್ಮ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಲಿವೆ. ಅದನ್ನು ಈಗಾಗಲೇ ನಾನು ಪಟ್ಟಿ ಮಾಡಿಕೊಂಡಿದ್ದೇನೆ ಎಂದರು. 
ಇ ಸಂದರ್ಭದಲ್ಲಿ ಉದ್ಯಮಿ ಶ್ರೀಧರ ನಾಯ್ಕರನ್ನು 
ಶಾಲೆಯ ಎಸ್ ಡಿ ಎಮ್ ಸಿ ,ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತಿ
ಈ ಸಂದರ್ಭದಲ್ಲಿ ಶಾಲೆಯ ಶಾಲೆಯ ಮುಖ್ಯ ಉಪಾಧ್ಯಾಯರಾದ ಗಂಗಾ ಮೊಗೇರ್,ಎಸ್ ಡಿ ಎಮ್ ಸಿ ಅಧ್ಯಕ್ಷ ಅನಂತ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು  ಹಾಗೂ ವೈದ್ಯರಾದ ರವಿ ನಾಯ್ಕ,ಎಸ್ ಡಿ ಎಮ್ ಸಿ ಸದಸ್ಯರಾದ ಗಣಪತಿ ನಾಯ್ಕ,ವೆಂಕಟರಮಣ ನಾಯ್ಕ,
ರಜಿನಿ ನಾಯ್ಕ,ಯಶೋದ ನಾಯ್ಕ,ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ,ಕಾಂಗ್ರೆಸ್ ಮುಖಂಡ ಸಚಿನ್ ನಾಯ್ಕ,
ಸ್ಥಳೀಯರಾದ ಮಂಜುನಾಥ ನಾಯ್ಕ,ಹನುಮಂತ ನಾಯ್ಕ,
ಮುಂತಾದವರು ಉಪಸ್ಥಿತರಿದ್ದರು.


Share: