ಭಟ್ಕಳ, ಜನವರಿ 22: ಭಟ್ಕಳ ಪುರಸಭೆಯಲ್ಲಿ ದಿನಗೋಲಿ ಆಧಾರದಲ್ಲಿ ನೇಮವಾಗಿ ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದವರನ್ನು ಮನೆಗೆ ಕಳುಹಿಸಿ ಟೆಂಡರ್ ಮೂಲಕ ಹೊಸದಾಗಿ ದಿನಗೂಲಿ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿರುವ ಭಟ್ಕಳ ಪುರಸಭೇಯ ಅಧಿಕಾರಿಗಳ ಕಠಿನ ಕಾನೂನು ಕ್ರಮವನ್ನು ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಇಂದು ಇಲ್ಲಿನ ಪುರಸಭೆ ಕಾರ್ಯಲಯದ ಮುಂದೆ ಧರಣಿ ಸತ್ಯಗ್ರಹವನ್ನು ಹಮ್ಮಿಕೊಂಡಿದೆ.
1998 ರಿಂದ 55 ಜನ ಪೌರ ಕಾರ್ಮಿಕರು ದಿನಗೂಲಿ ನೌಕರರಾಗಿ ಕಾರ್ಯನಿರ್ವವಹಿಸುತ್ತಿದ್ದು ಅದರಲ್ಲಿ ಹತ್ತು ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ’ಡಿ’ ದರ್ಜೆಯ ನೌಕರರೆಂದು ಪರಿಗಣಿಸಿ ಸರಕಾರವು ರಾಜ್ಯದ ಎಲ್ಲಾ ಪುರಸಭೆ, ನಗರ ಸಭೆ,ಪಟ್ಟಣ ಪಂಚಾಯತ ಗಳಿಗೆ ಆದೇಶಸಿದ್ದು ಅದರಂತೆ ಅಂದಿನ ಜಿಲ್ಲಾಧಿಕಾರಿ ರಿತೇಶ ಕುಮಾರ್ ಅವರು ಭಟ್ಕಳ ಪುರಸಭೆಯ ೫೫ ಜನ ದಿನಗೂಲಿ ಪೌರಕಾರ್ಮಿಕರಲ್ಲಿ ೨೭ಜನರನ್ನು ೧೦ವರ್ಷಕ್ಕೂ ಮೇಲ್ಪಟ್ಟವರೆಂದು ಪರಿಗಣಿಸಿ ’ಡಿ’ ಗುಂಪಿನ ನೌಕರರೆಂದು ಆದೇಶವನ್ನು ನೀಡಿದ್ದು ಉಳಿದ ೨೪ ಜನರನ್ನು ನಂತರದ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದಾಗಿ ಅದೇಶದಲ್ಲಿ ತಿಳಿಸಿದ್ದು ಈಗ ಭಟ್ಕಳ ಪುರಸಭೆಯು ಜ.೩ರಂದು೨೪ ಜನ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದು ನಾವು ಟೆಂಡರ್ ಮೂಲಕ ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಪುರ ಸಭೆಯ ಈ ದಲಿತ ದೋರಣೆಯನ್ನು ಪ್ರಭಲವಾಗಿ ಖಂಡಿಸಿದ ದಲಿತ ಸಂಘರ್ಷಸಮಿತಿ ಉತ್ತರಕನ್ನಡ ಜಿಲ್ಲಾ ಸಂಚಾಲಕ ಶಿವಾಜಿ ಬನವಾಸಿಯವರ ಮಾರ್ಗದರ್ಶನದಂತೆ ಇಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ದಲಿತರಿಗೆ ನ್ಯಾಯ ಸಿಗುವವರೆಗೂ ತಮ್ಮ ಈ ಹೋರಾಟ ಮುಂದುವರೆಯುತ್ತದೆ ಎಂದು ಡಿ.ಎಸ್.ಎಸ್. ತಾಲೂಕಾ ಸಂಚಾಲಕ ಪಿ. ರಾಜಕುಮಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಪ್ರಾಮಾಣಿಕವಾಗಿ ದಿನಗೂಲಿ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸೇವಾ ಹಿರಿತನದಲ್ಲಿರುವ ಪೌರಕಾರ್ಮಿಕರಿಗೆ ಪುರಸಭೆಯು ’ಡಿ’ ದರ್ಜೆಯ ಬಡ್ತಿಯನ್ನು ನೀಡದೆ ಅವರಿಗೆ ಎಕಾಎಕಿ ಮನೆಗೆ ಕಳುಹಿಸುತ್ತಿರುವುದು ಪುರಸಭೆಯು ದಲಿತರ ಮೇಲೆ ಮಾಡುತ್ತಿರುವ ದೌರ್ಜನ್ಯವಾಗಿದೆ ಎಂದು ತಿಳಿಸಿದ ಅವರು ೨೪ ದಲಿತ ಕುಟುಂಬಗಳು ಬೀದಿಪಾಲಾಗುತ್ತಿರುವುದು ಅಷ್ಟೆ ಅಲ್ಲದೆ ಅವರನ್ನು ನಂಬಿ ಬದುಕ್ಕುತ್ತಿರುವ ನೂರಾರು ಜನರು ಈಗ ಅಸಹಾಯಕ ಜೀವನವನ್ನು ನಡೆಸಬೇಕಾದಂತಹ ಪರಿಸ್ಥಿತಿಯು ನಿಮಾರ್ಣವಾಗಿದೆ ದಲಿತರ ಮೇಲೆ ಆಗುತ್ತಿರುವ ಈ ಅನ್ಯಾಯವನ್ನು ಡಿ.ಎಸ್.ಎಸ್ ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಿಲ್ಲ ಇವರ ಬೆಂಬಲಕ್ಕೆ ನಿಂತುಕೊಂಡು ಇವರಿಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಮಾಡುವುದಾಗಿ ಅವರು ತಿಳಿಸಿದ್ದಾರೆ. ಕೂಡಲೆ ಟೆಂಡರ್ ಪ್ರಕ್ರಿಯೆಯನ್ನು ನಿಲ್ಲಿಸಿ ಬಹಳ ವರ್ಷದಿಂದ ದಿನಗೂಲಿಗಳಾಗಿ ದುಡಿಯುತ್ತಿರುವವರನ್ನೆ ನೇಮಕಮಾಡಿಕೊಳ್ಳವಂತೆ ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ದಲಿತರಿಗೆ ಸೂಕ್ತ ನ್ಯಾಯ ಸಿಗದ್ದಿದ್ದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಅವರು ತಿಳಿದ್ದಾರೆ. ಧರಣಿ ಸತ್ಯಗ್ರಹದ ನೇತೃತ್ವವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ವಹಿಸಿಕೊಂಡಿದ್ದು ಕಾರವಾರದ ಶಾಮಸುಂದರ ಶಿರಸಿಯ ಮಲ್ಲೇಶಪ್ಪ ವಾಲ್ಮಿಕಿ, ಯಲ್ಲಾಪೂರದ ಸೀತಾ ಸಿದ್ದಿ, ಮತ್ತು ಹೊನ್ನಾವರದ ನಾಗೇಶ ಮುಕ್ಕಿಯವರು ನೇತೃತ್ವವನ್ನು ವಹಿಸಿಕೊಂಡಿದ್ದರು.