ಚಿಕ್ಕಬಳ್ಳಾಪುರ, ನವಂಬರ್ 18 : ಒಂದೇ ಕುಟುಂಭದ ನಾಲ್ಕು ಮಂದಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದರ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ಗುಪ್ತ ನೀಡಿದ ಮಾಹಿತಿಯಂತೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಸಾವು ಬದುಕಿನ ಮದ್ಯೆ ಹೊರಾಟ ನಡೆಸುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನಗರದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ತಾಲೂಕಿನಲ್ಲಿ ಕಾರ್ಯ ತತ್ಪರತೆಯಲ್ಲಿ ಮೆರೆಯುತ್ತಿರುವ ಆರೋಗ್ಯ ಕವಚ 108 ಆಂಬುಲೆನ್ಸ್ ವಾಹನಕ್ಕೆ ಇಂದು ಮೂರು ಮಂದಿಯ ಪ್ರಾಣವನ್ನು ಉಳಿಸುವ ಮೂಲಕ ಮತ್ತೊಂದು ಗರಿಯನ್ನು ಕಿರೀಟಕ್ಕೇರಿಸಿಕೊಂಡಿದೆ.
ಇಂದು ಆತ್ಮ ಹತ್ಯೆಗೆ ಯತ್ನಿಸಿದ್ದ ಮನೆಯ ಬಳಿಗೆ ಕೆಲವೇ ನಿಮಿಷಗಳಲ್ಲಿ ಸೇರಿಕೊಂಡ 108 ಬದುಕಿಗಾಗಿ ಹೋರಾಡುತ್ತಿದ್ದ ಮೂವರನ್ನು ಕ್ಷಣಗಳಲ್ಲಿ ಆಂಬುಲೆನ್ಸಿಗೇರಿಕೊಂಡು ಆಸ್ಪತ್ರೆಗೆ ತೆರಳುವ ಮೂಲಕ ಮೂರು ಜೀವಗಳನ್ನು ಕಾಪಾಡಿದೆ, ಹೆಲ್ತ್ ಡೆಸ್ಕ್ನ ಹರ್ಷ ಹಾಗು ಅವರ ಸಿಬ್ಬಂದಿ ಮನೆಯಬಳಿ ವಿಷ ಸೇವಿಸಿದ್ದವರನ್ನು ಕೋಡ್ಯೊಯ್ದ ಕಾರ್ಯವಿಧಾನ ಕೌತುಕದಿಂದ ನೆರೆದಿದ್ದ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.