ಭಟ್ಕಳ, ಅಕ್ಟೋಬರ್ 31: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಹಾಗೂ ತುರ್ತು ಸ್ಥಿತಿಯಲ್ಲಿ ಪರಿಹಾರ ಮತ್ತು ಪುನರ್ ವಸತಿ ಕಾರ್ಯವನ್ನು ಕೈಗೊಳ್ಳುವ ಅಂಗ ಸಂಸ್ಥೆಯಾದ ಹುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ಎಚ್.ಆರ್.ಎಸ್. ವತಿಯಿಂದ ಇತ್ತಿಚೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರತಿಕೃತಿ ವಿಕೋಪದ ಸಂದರ್ಭದಲ್ಲಿ ತಕ್ಷಣದ ಪರಿಹಾರ ಕಾರ್ಯವನ್ನು ಕೈಗೊಂಡಿದ್ದು ಸುಮಾರು 142 ಕುಟುಂಬಗಳನ್ನು ಸರ್ವೆ ಮಾಡಿ ಅವರಿಗೆ ತುರ್ತು ಪರಿಹಾರವಾಗಿ 1.20 ಲಕ್ಷ ರೂಗಳ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಗಿದ್ದು ಇನ್ನು ಬಹಳಷ್ಟು ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕಿದೆ ಎಂದು ಎಚ್.ಆರ್.ಎಸ್. ಭಟ್ಕಳ ಶಾಖೆಯ ಸಂಚಾಲಕ ಶೌಕತ್ ಕತೀಬ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಗುರುವಾರ ಜಮಾತೆ ಇಸ್ಲಾಮಿ ಹಿಂದ್ ನಿಯೋಗವೊಂದು ತಹಸಿಲ್ದಾರ್ ಎಂ.ಎಸ್. ನಾಯ್ಕ ರನ್ನು ಭೇಟಿಯಾಗಿ ತಾವು ಕೈಗೊಂಡ ಪರಿಹಾರ ಕಾರ್ಯ ಹಾಗೂ ಸರ್ವೇಯ ವರದಿಯನ್ನು ನೀಡಿದ್ದು ಜಿಲ್ಲೆಯಲ್ಲಿ ಪರಿಹಾರ ಕಾರ್ಯವನ್ನು ಚುರುಕುಗೊಳಿಸುವಂತೆ ಜಿಲ್ಲಧಿಕಾರಿಯವರಲ್ಲಿ ಮನವಿಯನ್ನು ಮಾಡಿದ್ದಾರೆ.
ಉತ್ತರ ಕರ್ನಾಟಕದ ೮ ಜಿಲ್ಲೆಗಳಲ್ಲಿ ಎಚ್.ಆರ್.ಎಸ್ ನ ಪರಿಹಾರ ಕಾರ್ಯವು ಭರದಿಂದ ಸಾಗಿದ್ದು ಸುಮಾಸು 4262 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ಟ್ ಗಳನ್ನು ವಿತರಿಸಿದ್ದು 4651 ಕುಟುಂಬಗಳಿಗೆ ಬಟ್ಟೆ ಹಾಗೂ ಕಂಬಳಿಗಳನ್ನು ವಿತರಿಸಿದ್ದು ಸಾವಿರಾರು ಜನರಿಗೆ ಔಷದೋಪಚಾರವನ್ನು ಕೈಗೊಳ್ಳಲಾಗಿದೆ ಅಲ್ಲದೆ 8000 ಸಾವಿರ ಮನೆಗಳ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ್ದು ಇದರಲ್ಲಿ ಬಹಳಷ್ಟು ಮನೆಗಳು ತಕ್ಷಣವೆ ದುರಸ್ಥಿ ಮಾಡಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಮಾಅತೆ ಇಸ್ಲಾಮಿ ಹಿಂದ್ ನ ಈ ನಿಯೋಗದಲ್ಲಿ ಸ್ಥಾನಿ ಅಧ್ಯಕ್ಷ ಸಾದಾ ಮೀರಾ, ಫಾರೂಖ್ ಮಾಸ್ಟರ್ ಯಾಹ್ಯ ರುಕ್ನುದ್ದೀನ್ ಮುಂತಾದವರು ಇದ್ದರು.